Featured

ಶಿಕಾರಿಪುರ: ಶ್ರೀಗಂಧ ಕಳ್ಳರ ಬಂಧನ

ಶಿಕಾರಿಪುರ ವಲಯದ (ಸಾಗರ ವಿಭಾಗ) ಕೆಂಗಟ್ಟೆ ಶ್ರೀಗಂಧ ಮೀಸಲು ಪ್ರದೇಶದಲ್ಲಿ ಮರ ಕಳ್ಳತನಕ್ಕೆ ಯತ್ನಿಸಿದ ಆರೋಪಿಗಳ ಪತ್ತೆ ಹಚ್ಚಿ, ಒಬ್ಬನನ್ನು ಬಂಧಿಸುವಲ್ಲಿ RFO ರೇವಣಸಿದ್ಧಯ್ಯ ಬಿ. ಹಿರೇಮಠ್ ಹಾಗೂ ಅವರ ತಂಡ ಯಶಸ್ವಿಯಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ತಾಲೂಕಿನ ಇಂದಿರಾನಗರ ಮೂಲದ ಆರು ಜನರು, ಮಳೆ ಬರುವ ಸಮಯವನ್ನು ಸದುಪಯೋಗ ಮಾಡಿಕೊಂಡು, ರಾತ್ರಿ ವೇಳೆ ಬೇಲಿಯನ್ನು ಕತ್ತರಿಸಿ ಅಕ್ರಮ ಪ್ರವೇಶ ಮಾಡಿದ್ದರು. ಇವರ ಪತ್ತೆಗೆ ವಿಶೇಷವಾಗಿ ಮುಧೋಳ ನಾಯಿ ಬಳಸಿರುವುದು ಗಮನಾರ್ಹ.

ಈ ಕಾರ್ಯಾಚರಣೆ DCF ಮೋಹನಕುಮಾರ್ (ಸಾಗರ) ಮತ್ತು ACF ವಿ. ಎಸ್. ರವೀಂದ್ರನಾಯ್ಕ್ ಅವರ ಮಾರ್ಗದರ್ಶನದಲ್ಲಿ ನಡೆದಿದೆ. ಕಾರ್ಯಾಚರಣೆಯಲ್ಲಿ KFDC ನೆಡುತೋಪು ಅಧೀಕ್ಷಕ ಅಶ್ವಿನ್, DRFO ಕುಮಾರನಾಯ್ಕ್, ಪ್ರಮೋದ್, ರಂಗನಾಥ್, ಕೊಟ್ರೇಶ್, ಸಚಿನ್, ಹಾಗೂ ಗಸ್ತು ವನಪಾಲಕರಾದ ಶಿವಪ್ಪ ರಾಠೋಡ್, ಬಸವರಾಜ್, ಸಂತೋಷ್, ಸುನಿಲ್, ಅಣ್ಣಪ್ಪ ಮೊದಲಾದವರು ಪಾಲ್ಗೊಂಡಿದ್ದರು.

ಆ. 13ರಂದು ಹೊಸನಗರದಲ್ಲಿ ಮಾಮ್‌ಕೋಸ್ ಷೇರುದಾರರ ಸಭೆ

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650