Ripponpet | ಮರ್ಯಾದ ಪುರುಷೋತ್ತಮ ಶ್ರೀರಾಮನಿಗೆ ಬ್ರಾಹ್ಮಣ ಸಭಾಭವನದಲ್ಲಿ ವಿಶೇಷ ಪೂಜೆ
ರಿಪ್ಪನ್ಪೇಟೆ : ಇಂದು ಅಯೋಧ್ಯೆಯಲ್ಲಿ ಲೋಕಾರ್ಪಣೆಗೊಂಡ ಶ್ರೀರಾಮಲಲ್ಲಾ ಮೂರ್ತಿಯ ಪ್ರತಿಷ್ಟಾಪನಾ ಕಾರ್ಯಕ್ರಮದ ಅಂಗವಾಗಿ ರಿಪ್ಪನ್ಪೇಟೆಯ ಬ್ರಾಹ್ಮಣ ಸಮಾಜದ ಶ್ರಿರಾಮ ಮಂದಿರದಲ್ಲಿ ವಿಶೇಷ ಅಲಂಕಾರ ಪೂಜೆ ಮತ್ತು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಶ್ರದ್ದಾಭಕ್ತಿಯಿಂದ ನೆರವೇರಿದವು.
ಹೆಚ್.ಎಸ್.ಸುಧೀಂದ್ರ ಹೆಬ್ಬಾರ್ ಮತ್ತು ದೀಪಾ ಹೆಬ್ಬಾರ್ ಇವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಿರ್ವಿಘ್ನವಾಗಿ ಜರುಗಿ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನೆರವೇರಿತು.
ಬ್ರಾಹ್ಮಣ ಸಮಾಜದ ಅಧ್ಯಕ್ಷ ಹೆಚ್.ಪಿ.ಸುರೇಶ್, ಪ್ರೇಮಚಂದ್ರ, ಶಿವಾನಂದ, ಗಣೇಶ್ ಹತ್ವಾರ್, ಪದ್ಮಾ ಸುರೇಶ್, ಉಮಾಸುರೇಶ್, ರಾಮಕೃಷ್ಣ, ರವಿ ಬಲ್ಲಾಳ್, ನಾಗೇಶ್ ಹೆಬ್ಬಾರ್, ರಾಮು ಹೆಬ್ಬಾರ್, ರಾಧಾಕೃಷ್ಣ, ನಾಗಭೂಷಣ ಭಟ್ ಸೂಡೂರು, ಪ್ರಭಾಕರ್ ಭಟ್ ಕಮದೂರು, ಸವಿತಾ ರಾಧಾಕೃಷ್ಣ ಇನ್ನಿತರರು ಸಮಾಜದ ಮುಖಂಡರು ಪಾಲ್ಗೊಂಡಿದ್ದರು.