ವಿದ್ಯೆ ದುಡಿಮೆ ತಾಳ್ಮೆ ಇದ್ದರೆ ಬದುಕು ಯಶಸ್ವಿ ; ಮಳಲಿ ಶ್ರೀ
ರಿಪ್ಪನ್ಪೇಟೆ: ಬದುಕಿನ ಯಶಸ್ವಿಗೆ ವಿದ್ಯೆ ದುಡಿಮೆ ಹಾಗೂ ಸಹನೆ ಇದ್ದರೆ ಜೀವನ ಪಾವನ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಮಳಲಿಮಠದಲ್ಲಿ ನಾಗರಪಂಚಮಿ ಅಂಗವಾಗಿ ಶ್ರೀ ಅದಿಗುರುನಾಗಾರ್ಜುನ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿ ಆಶೀರ್ವಚನ ನೀಡಿ, ನಮ್ಮ ಭಾರತೀಯ ಸಂಸ್ಕೃತಿ ಅಮೂಲ್ಯವಾಗಿದ್ದು ಪ್ರತಿಯೊಂದು ಹಬ್ಬಗಳನ್ನು ವೈಶಿಷ್ಠ ಪೂರ್ಣವಾಗಿ ಆಚರಿಸುವುದರೊಂದಿಗೆ ಸಾಮರಸ್ಯವನ್ನು ಬೆಳಸುವಂತಾಗಿವೆ ಎಂದರು.