ಕಾಂಗ್ರೆಸ್ನ ಕಾರ್ಯಕರ್ತರು ಹಾಗೂ ಈಶ್ವರಪ್ಪನವರ ಅಭಿಮಾನಿಗಳು ಬಿಜೆಪಿಗೆ ಸೇರ್ಪಡೆ
ಹೊಸನಗರ: ತಾಲ್ಲೂಕಿನಲ್ಲಿ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಈಶ್ವರಪ್ಪನವರ ಅಭಿಮಾನಿಗಳು ಪ್ರತಿದಿನ ನೂರಾರು ಸಂಖೆಯಲ್ಲಿ ಸೇರ್ಪಡೆಯಾಗುತ್ತಿದ್ದು ಅದರಂತೆ ಸುಮಾರು ಎಂಟು ವರ್ಷಗಳಿಂದ ಈಶ್ವರಪ್ಪ ಬಳಿ ಕೆಲಸ ಮಾಡುತ್ತಿದ್ದ ಜಯನಗರದ ನಾಗರಾಜ್ರವರ ಜೊತೆ ನೂರಾರು ಸಂಖ್ಯೆಯ ಅವರ ಅಭಿಮಾನಿಗಳು ಹೊಸನಗರ ಬಿಜೆಪಿ ಕಛೇರಿಯಲ್ಲಿ ತಾಲ್ಲೂಕು ಬಿಜೆಪಿ ಮಂಡಲದ ಅಧ್ಯಕ್ಷ ನಿಟ್ಟೂರು ಸುಬ್ರಹ್ಮಣ್ಯರವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯರಾದ ಎನ್.ಆರ್ ದೇವಾನಂದ್, ಶ್ರೀಪತಿರಾವ್, ಮಂಜುನಾಥ್ ಸಂಜೀವಣ್ಣ, ಸತ್ಯನಾರಾಯಣ ವಿ, ವಿಜಯಕುಮಾರ್, ಪಿ ಮನೋಹರ, ಕೋಣೆಮನೆ ಶಿವಕುಮಾರ್, ಶಿವಾನಂದ, ಮಂಡಾನಿ ಮೋಹನ್, ಗುರುರಾಜ್, ಗಿರೀಶ ಹೆಚ್.ಎಸ್, ಹರೀಶ್ ಹೆಚ್ ಎಸ್, ಸುರೇಶ್ ಸರ್ಬಾಡಿ ಇನ್ನೂ ಮುಂತಾದವರ ಉಪಸ್ಥಿತರಿದ್ದರು.