ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ಸಾವು ಮತ್ತೋರ್ವನ ಸ್ಥಿತಿ ಗಂಭೀರ
ರಿಪ್ಪನ್ಪೇಟೆ : ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೋರ್ವ ಸಾವನ್ನಪ್ಪಿ ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ 12:30 ರ ಸುಮಾರಿಗೆ ಹುಂಚ ಗ್ರಾಪಂ ವ್ಯಾಪ್ತಿಯ ಆನೆಗದ್ದೆ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ನಾರಾಯಣ ಪೂಜಾರಿ (55) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಬ್ಬಿಣದ ಏಣಿಯ ಸಹಾಯದಿಂದ ವಿದ್ಯುತ್ ಕಂಬವನ್ನು ಹತ್ತಿ ಬೀದಿ ದೀಪ ಅಳವಡಿಸುತ್ತಿರುವಾಗ ಏಣಿ ಜಾರಿದ ಪರಿಣಾಮ ಅದೇ ಕಂಬದಲ್ಲಿ ಹಾದುಹೋಗಿದ್ದ 11 ಕೆವಿ ವಿದ್ಯುತ್ ಲೈನಿಗೆ ಏಣಿ ತಗುಲಿ ನಾರಾಯಣ ಪೂಜಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ವೇಳೆ ಕೆಳಗಿದ್ದ ಗ್ರಾಪಂ ಸಿಬ್ಬಂದಿಗೂ ವಿದ್ಯುತ್ ತಗುಲಿ ಆತನ ಕೈಗೆ ಗಂಭೀರ ಗಾಯವಾಗಿರುವುದಾಗಿ ‘ಮಲ್ನಾಡ್ ಟೈಮ್ಸ್’ಗೆ ಬಲ್ಲ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಈ ಘಟನೆ ರಿಪ್ಪನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.