ಸರ್ಕಾರಗಳು ಜನರ ಕಲ್ಯಾಣಕ್ಕಾಗಿ ಇರಬೇಕೇ ಹೊರತು ಧರ್ಮದ ಪ್ರಚಾರಕ್ಕಲ್ಲ : ನಟ ಪ್ರಕಾಶ್ ರೈ

0 42

ಶಿವಮೊಗ್ಗ : ಸರ್ಕಾರದ ಭಾಗ್ಯಗಳು ಬಡವರನ್ನು ತಲು
ಪದಿದ್ದಾಗ ಪ್ರಶ್ನೆ ಮಾಡುವುದು ಸರಿಯಾಗಿದೆ ಏಕೆಂದರೆ ಸರ್ಕಾರದ ಗ್ಯಾರಂಟಿಗಳು ಬಡವರ ಪಾಲಿನ ಭಾಗ್ಯಗಳಾಗಿವೆ. ಎಂದು ನಟ, ಚಿಂತಕ ಪ್ರಕಾಶ್ ರೈ
ಅಭಿಪ್ರಾಯಿಸಿದರು.


ಅವರು ಇಂದು ಹೋಟೆಲ್ ಮಥುರಾ ಪ್ಯಾರಾಡೈಸ್
ಸಭಾಂಗಣದಲ್ಲಿ ವಿವೇಕ ಶಿವಮೊಗ್ಗ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ
ಪಾಲ್ಗೊಂಡು ಮಾತನಾಡುತ್ತಿದ್ದರು. ಯಾವುದೇ ಸರ್ಕಾರಗಳು ಜನರ ಕಲ್ಯಾಣಕ್ಕಾಗಿಯೇ ಇರಬೇಕೇ ಹೊರತು ಧರ್ಮದ ಪ್ರಚಾರಕ್ಕಲ್ಲ. ಸರ್ಕಾರದ ಗ್ಯಾರಂಟಿಗಳು ಜನರ ಕಲ್ಯಾಣಕ್ಕಾಗಿಯೇ ಇರುತ್ತವೆ. ಅವು ಬಡವರ ಪಾಲಿಗೆ ವರದಾನವಾಗಿರುತ್ತವೆ. ಆದರೆ ಈ ಯೋಜನೆಗಳು ಎಲ್ಲರನ್ನೂ ತಲುಪಬೇಕು ಅಷ್ಟೆ. ಮನೆಯಿಂದ ಹೊರಜಗತ್ತನ್ನು ನೋಡದ ನಮ್ಮ ಎಷ್ಟೊ ಹೆಣ್ಣು ಮಕ್ಕಳು ಈಗ ಓಡಾಡುತ್ತಿದ್ದಾರೆ ಎಂದರೆ ಸಂತೋಷದ ವಿಷಯವಲ್ಲವೇ. ಒಂದು ಹೊತ್ತಿನ
ಊಟಕ್ಕೂ ಕಷ್ಟಪಡುವವರಿಗೆ ಒಂದು ತುತ್ತು ಅನ್ನ ನೀಡುವುದು ನ್ಯಾಯವಾಗಿಯೇ ಇದೆ. ಈ ಯೋಜನೆಗಳು ಕೂಡ ನಮ್ಮ ತೆರಿಗೆಯಿಂದಲೇ ರೂಪಿತವಾದವು. ಇದಕ್ಕಾಗಿ ಹೊಟ್ಟ ಉರಿಬೇಡ. ಮನುಷ್ಯ ಪ್ರೇಮದಿಂದ ಇವುಗಳನ್ನು ಸ್ವಾಗತಿಸೋಣ. ಆದರೆ ಸರಿಯಾಗಿ ಜಾರಿಯಾಗದಿದ್ದಾಗ ಪ್ರಶ್ನೆ ಮಾಡೋಣ ಎಂದರು.


ಪ್ರಧಾನಿ ಮೋದಿಯವರು ಗ್ಯಾರಂಟಿ ಯೋಜನೆಗಳಿಂದ
ದೇಶದ ಆರ್ಥಿಕ ಸ್ಥಿತಿ ನಾಶವಾಗುತ್ತದೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ
ಅವರು, ಹಾಗಾದರೆ ಇಡೀ ದೇಶದ ಆರ್ಥಿಕತೆ ಇಳಿಮುಖವಾಗಿರುವುದು ಯಾವ ಕಾರಣಕ್ಕೆ ಇದು ಕೇವಲ ರಾಜಕಾರಣದ ಹೇಳಿಕೆಯೇ ಹೊರತು ಸತ್ಯದ ಹೇಳಿಕೆಯಲ್ಲ. ಕೇಂದ್ರದ ಹಲವು ಯೋಜನೆಗಳು ಜಾರಿಯಲ್ಲಿವೆ. ಪ್ರಧಾನಿಯೇನೂ ದೇವರಲ್ಲ. ಅವರು ಐದು ವರ್ಷ ಮಾತ್ರ ಅಧಿಕಾರದಲ್ಲಿರುತ್ತಾರೆ. ಜನಸಾಮಾನ್ಯರು ಕೂಡ ಪ್ರಶ್ನೆ ಮಾಡಬಹುದಾಗಿದೆ ಎಂದರು.


ಹಿಂಸೆಗೆ ಯಾವುದೇ ಧರ್ಮ ಇಲ್ಲ. ಯಾವ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ. ಆದರೆ ಸರ್ಕಾರದ ಧರ್ಮದ ಹುಚ್ಚುತನಗಳು ಸಮಾಜದಲ್ಲಿ ಅಶಾಂತಿ ಹುಟ್ಟಿಸುತ್ತವೆ. ನಮ್ಮ ಮನೆಯ ಹೆಣ್ಣು ಮಕ್ಕಳು ತಲ್ಲಣಗಳಿಗೆ ಒಳಗಾಗುತ್ತಿದ್ದಾರೆ. ಎಲ್ಲರೂ ಎಲ್ಲರನ್ನೂ ಪ್ರೀತಿಸುವುದೇ ಧರ್ಮ ನಮಗೆ ಜಗಳ,‌ ದ್ವೇಷ ಬೇಡ. ಮನಸ್ಸಿಗೆ ಆದ ಗಾಯಗಳು ಮಾಯ ಬಹುದು. ಆದರೆ ಸಮಾಜಕ್ಕೆ ಆದ ಗಾಯಗಳನ್ನು ವಾಸಿ ಮಾಡು ವುದು ತುಂಬಾ ಕಷ್ಟ ಎಂದರು.


ಪಠ್ಯ ಪುಸ್ತಕ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪಠ್ಯ ಪುಸ್ತಕವಿವಾದ ಈಗಿನದಲ್ಲ. ಅದು ಒಮ್ಮೆ ಬದಲಾದ ಕಾರಣಕ್ಕಾಗಿ ಈಗ ಮತ್ತೆ ಪ್ರಶ್ನೆ ಮಾಡಲಾಗುತ್ತಿದೆ. ಪಠ್ಯಗಳನ್ನು ನಿರೂಪಿಸ ಬೇಕಾದವರು ರಾಜಕಾರಣಿಗಳಲ್ಲ. ರಾಜಕಾರಣಿಗಳು ಅವರಿಗೆ ಬೇಕಾದಂತೆ ವಿಷಯಗಳನ್ನು ವಿಷ ಹಾಕಿ ಉಣಬಡಿಸುತ್ತಾರೆ. ಯಾವುದೇ ಸರ್ಕಾರ ರಾಜಕೀಯ ಪಕ್ಷಗಳು ಪಠ್ಯ ಪುಸ್ತಕಗಳನ್ನು ಕೂಡ ಧರ್ಮದ ಬೋಧನೆಗೆ ಬಳಸುವುದಲ್ಲ. ಅಥವಾ ಕೇಸರಿ ಬಣ್ಣ ಬಳಿಯುವುದೂ ಅಲ್ಲ. ಅದು ಮಕ್ಕಳ ವಿಕಾಸಕ್ಕೆ ಕಾರಣವಾಗ
ಬೇಕೇ ಹೊರತು ವಿನಾಶಕ್ಕಲ್ಲ ಎಂದರು.


ಒಂದು ಪಕ್ಷದ ವಿರುದ್ಧ ಮಾತನಾಡಿದರೆ ಹಿಂದೂ ವಿರೋಧಿ
ಎಂಬ ಹಣೆ ಪಟ್ಟಿ ಕಟ್ಟಲಾಗುತ್ತದೆ.ಯಾವುದೇ ಸರ್ಕಾರಗಳ ಮುಖ್ಯ ಕೆಲಸ ಉದ್ಯೋಗ ನೀಡುವುದೇ ಹೊರತು ದ್ವೇಷ
ಬೆಳೆಸುವುದಲ್ಲ. ನಾವು ವಿಶ್ವ ಮಾನವರಾಗಬೇಕು. ಬಣ್ಣಗಳ ಟೀಕಿಸುವುದಲ್ಲ. ಕನ್ನಡ ಚಿತ್ರರಂಗದಲ್ಲಿಯೂ ಕೂಡ ಒಳ್ಳೆಯ ಆಶಯದ ಚಿತ್ರಗಳು ಬರುತ್ತವೆ ಎಂದರು.

ಸಂವಾದ ಕಾರ್ಯಕ್ರಮದಲ್ಲಿ ವಿವೇಕ ಸಂಸ್ಥೆಯ ಅನನ್ಯ ಶಿವು, ಕೆ.ಎಲ್. ಅಶೋಕ್, ದಸಂಸದ ಹಾಲೇಶಪ್ಪ, ರೈತಮುಖಂಡ ಹೆಚ್.ಆರ್. ಬಸವರಾಜಪ್ಪ,
ಆರ್.ಕೆ. ಕುಮಾರ್ ಇದ್ದರು.

Leave A Reply

Your email address will not be published.

error: Content is protected !!