Hosanagara

ಆರ್ಥಿಕ ಪ್ರಗತಿಯತ್ತ ಶ್ರೀ ಜೇನುಕಲ್ಲಮ್ಮ ಸಹಕಾರಿ ಸಂಘ

HOSANAGARA ; ಸಂಘ ಆರಂಭಗೊಂಡು ಮೂರು ವರ್ಷವಾಗಿದ್ದು ನಿಧಾನಗತಿಯಲ್ಲಿ ಆರ್ಥಿಕ ಪ್ರಗತಿಯತ್ತ ಸಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಜಿ.ಸತ್ಯನಾರಾಯಣ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪಟ್ಟಣದ ಈಡಿಗರ ಸಭಾ ಭವನದಲ್ಲಿ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

220 ಸದಸ್ಯ ಬಲದೊಂದಿಗೆ ಆರಂಭಗೊಂಡ ಸಂಘವು ಪ್ರಸಕ್ತ ಸಾಲಿನಲ್ಲಿ 526 ಸದಸ್ಯರನ್ನು ಹೊಂದಿದೆ. ಕಳೆದ ಸಾಲಿನಲ್ಲಿ ಇದ್ದ 75 ಸಾವಿರ ರೂ. ಮೊತ್ತದ ಠೇವಣಿ ಸಂಗ್ರಹದ ಮೊತ್ತ ಇಂದು 24,26,975 ರೂ. ಆಗಿ ಏರಿಕೆ ಕಂಡಿದೆ. ಹಿಂದಿನ ಆರ್ಥಿಕ ಸಾಲಿಗೆ ಹೋಲಿಸಿದಲ್ಲಿ ಸಂಘವು ಒಟ್ಟಾರೆ ಪ್ರಗತಿ ಕಂಡಿದೆ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ವಾರಂಬಳ್ಳಿ ಜಿ. ಹಾಲಪ್ಪ, ಹಿರಿಯ ಲೆಕ್ಕ ಪರಿಶೋಧಕ ರಘುನಾಥ್ ಭಟ್, ಉಪಾಧ್ಯಕ್ಷೆ ಪೂರ್ಣಿಮಾ ಮೂರ್ತಿರಾವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಸುಮಂತ್, ನಿರ್ದೇಶಕರಾದ ಧನಂಜಯ ಮಂಡಾನಿ, ತೊಗರೆ ದಿನೇಶ್, ಗಂಗಾ ದೇವರಾಜ್, ನಾಗೇಶ್ ಹೆಚ್.ಎನ್, ಎಸ್.ಕೆ.ನಾಗಪ್ಪ, ಎನ್.ಪಿ.ರಮೇಶ್, ಟಿ.ಎನ್.ಶ್ರೀಪತಿ, ಪಿ.ತಿಮ್ಮಪ್ಪ, ಕೆ.ಈ. ಯೋಗೇಂದ್ರ, ಸಲಹ ಸಮಿತಿ ನಿರ್ದೇಶಕ ಲೋಕೇಶ್ವರ ಮಂಡಾನಿ, ಮಧುಸೂದನ್, ದಿವಾಕರ್, ನಿತ್ಯಾನಂದ, ಟೀಕಪ್ಪ ಸೇರಿದಂತೆ ಷೇರುದಾರರು ಸಭೆಯಲ್ಲಿ ಭಾಗವಹಿಸಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>