ಹೊಸನಗರ : ಹಳ್ಳಿ-ಹಳ್ಳಿ ಕಲ್ಲು ರಸ್ತೆಗಳಲ್ಲಿ ಬಸ್ಗಳನ್ನು ಮಾಲೀಕರು ಬಿಡುವುದೇ ಕಷ್ಟಕರವಾದ ಈ ಪರಿಸ್ಥಿತಿಯಲ್ಲಿ ಶ್ರೀ ದುರ್ಗಾಂಬಾ ಬಸ್ ಮಾಲೀಕರು ಹಳ್ಳಿ-ಹಳ್ಳಿಗಳ ಮಧ್ಯೆ ಸಂಚರಿಸುವ ಸುಳ್ಳಳ್ಳಿಯಿಂದ ತುಮರಿ ಮಾರ್ಗವಾಗಿ ಸಿಗಂದೂರು – ಬೆಂಗಳೂರಿಗೆ ಶ್ರೀ ದುರ್ಗಾಂಬಾ ಬಸ್ಗೆ ಸಸಿಗೊಳ್ಳಿಯಲ್ಲಿ ಚಾಲನೆ ನೀಡಲಾಯಿತು.
ಈ ಸಮಯದಲ್ಲಿ ಸಸಿಗೊಳ್ಳಿ ಜೀನಣ್ಣ ಮಾತನಾಡಿ, ಪ್ರಥಮ ಬಾರಿಗೆ ಸ್ಲೀಪರ್ ರೂಪದಲ್ಲಿ ಶ್ರೀ ದುರ್ಗಾಂಬಾ ಬಸ್ ಮಾಲೀಕರು ಕಲ್ಲು ಕೊರಕಲು ರಸ್ತೆಯಾದ ನಮ್ಮ ರಸ್ತೆಯಲ್ಲಿ ಸೇವೆಯನ್ನು ನಮ್ಮ ಸುತ್ತ-ಮುತ್ತಲಿನ ಹಳ್ಳಿ ಜನರು ಬೆಂಗಳೂರಿಗೆ ಪ್ರಯಾಣಿಸುವ ಸಲುವಾಗಿ ಬಸ್ಗೆ ಚಾಲನೆ ನೀಡಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಬಾಬಣ್ಣ ಮಂಜಯ್ಯ, ಜಯಂತ ಹೆಚ್.ಎಸ್. ರಾಘವೇಂದ್ರ ಹಾಗೂ ಗ್ರಾಮದ ಮತ್ತಿತರರು ಹಾಜರಿದ್ದು ಶುಭ ಹಾರೈಸಿದರು.
Malnad Times App ಡೌನ್ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

