Hombuja

ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ತಕ್ಷಣ ನಿಲ್ಲಿಸಿ ; ಹೊಂಬುಜ ಶ್ರೀಗಳು

ಹೊಂಬುಜ ; ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಶ್ರೀ ಕ್ಷೇತ್ರ ಹೊಂಬುಜ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಶ್ರೀಗಳು, ಗೇರುಸೊಪ್ಪ, ರಾಣಿ ಚನ್ನಭೈರವದೇವಿಯ ಐತಿಹಾಸಿಕ ರಾಜಧಾನಿ. ಇಂದಿಗೂ ಅನೇಕ ಜೈನ ದೇವಾಲಯಗಳು, ಸಾಂಸ್ಕೃತಿಕ ಸ್ಮಾರಕಗಳು ಹಾಗೂ ಅರಣ್ಯ ಸೌಂದರ್ಯವನ್ನು ಹೊತ್ತುಕೊಂಡಿರುವ ಈ ಪ್ರದೇಶವು ನಮ್ಮ ಪರಂಪರೆಯ ಹೆಮ್ಮೆ.

ಪ್ರಸ್ತಾಪವಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಗೇರುಸೊಪ್ಪ ಪ್ರದೇಶದ ಐತಿಹಾಸಿಕ ಸ್ಮಾರಕಗಳನ್ನು ನಾಶಮಾಡುವುದರ ಜೊತೆಗೆ, ಅರಣ್ಯಗಳನ್ನು ಮುಳುಗಿಸುವ ಮೂಲಕ ಅನೇಕ ಜೀವಜಲ, ಪಕ್ಷಿ-ಪ್ರಾಣಿ, ಮತ್ತು ಸಸ್ಯಗಳನ್ನು ಅಪಾಯಕ್ಕೊಳಪಡಿಸುತ್ತದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ಈ ಯೋಜನೆ ಅನುಷ್ಠಾನಗೊಂಡರೆ :

ಐತಿಹಾಸಿಕ ನಾಶ: ರಾಣಿ ಚನ್ನಭೈರವದೇವಿಯ ಕಾಲದ ಸ್ಮಾರಕಗಳು ಅಳಿದು ಹೋಗುತ್ತವೆ.

ಪರಿಸರ ಹಾನಿ: ದಟ್ಟ ಅರಣ್ಯಗಳು ಮುಳುಗಿ ಜೀವವೈವಿಧ್ಯ ನಾಶವಾಗುತ್ತದೆ.

ಸಮುದಾಯ ಹಾನಿ: ಸ್ಥಳೀಯ ಜನರ ಬದುಕು, ಸಂಸ್ಕೃತಿ, ಆಸ್ಥೆ ಅಪಾಯಕ್ಕೊಳಗಾಗುತ್ತದೆ.

ಅದಕ್ಕಾಗಿ ಸರ್ಕಾರ ಮತ್ತು ಆಡಳಿತವು ಈ ಯೋಜನೆಯನ್ನು ತಕ್ಷಣ ನಿಲ್ಲಿಸಿ, ಗೇರುಸೊಪ್ಪವನ್ನು ಐತಿಹಾಸಿಕ ಹಾಗೂ ಪರಿಸರ ಸಂವೇದನಾಶೀಲ ಕ್ಷೇತ್ರವೆಂದು ಘೋಷಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>