ಹೊಸನಗರ ; ನಾಳೆ (ಏ.14) ಬೆಳಿಗ್ಗೆ 10 ಗಂಟೆಗೆ ಉಡುಪಿಯ ಮೂಲಮಹಾಸಂಸ್ಥಾನ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದ ಸ್ವಾಮೀಜಿಗಳು ಹಾಗೂ ಅವರ ಶಿಷ್ಯರಾದ ಸುಶೀಂದ್ರ ತೀರ್ಥ ಸ್ವಾಮೀಜಿಯವರು ಬೆಳಿಗ್ಗೆ ಹೊಸನಗರದ ರಾಘವೇಂದ್ರ ಸ್ವಾಮಿ ಬೃಂದಾವನಕ್ಕೆ ಆಗಮಿಸಲಿದ್ದಾರೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ವಿಜೇಂದ್ರ ಶೇಟ್ ತಿಳಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಹೊಸನಗರದ ಕೋರ್ಟ್ ಸರ್ಕಲ್ನಿಂದ ರಾಘವೇಂದ್ರ ಸ್ವಾಮಿ ಬೃಂದಾವನದವರೆಗೆ ಸ್ವಾಮೀಜಿಯವರ ಮೆರವಣಿಗೆ ನಡೆಸಲಿದ್ದು ನಂತರ ಸಂಜೆ 5 ಗಂಟೆಯವರೆಗೆ ದೇವಸ್ಥಾನದ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡುವರು.
ಹೊಸನಗರ ರಾಘವೇಂದ್ರ ಸಾಮೀಜಿಯವರ ಭಕ್ತಾರು ಸ್ವಾಮೀಜಿಯವರ ಭಕ್ತಾರು ಹಾಗೂ ಊರಿನ ಸಾರ್ವಜನಿಕರು ಆಗಮಿಸಿ ಸ್ವಾಮೀಜಿಯವರಿಂದ ಪ್ರಸಾದ ಪಡೆಯಬೇಕೆಂದು ಕೇಳಿಕೊಂಡಿದ್ದಾರೆ.
Malnad Times App ಡೌನ್ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

