ತರೀಕೆರೆ : ಮುಳ್ಳು ಚುಚ್ಚಿದೆ ಎಂದು ತಿಳಿದು ಮಲಗಿದ ವ್ಯಕ್ತಿಯ ಪ್ರಾಣಪಕ್ಷಿ ಬೆಳಗಾಗುವುದರೊಳಗೆ ಹಾರಿಹೋದ ಘಟನೆ ತರಿಕೇರೆ (Tharikere) ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ.
ಗಂಗಪ್ಪ (48) ಮೃತ ದುರ್ದೈವಿ. ಗದ್ದೆ ಕೆಲಸಕ್ಕೆ ಹೋದಾಗ ಗಂಗಪ್ಪನವರಿಗೆ ಹಾವು (Snake) ಕಚ್ಚಿದೆ. ಆದರೆ ಮುಳ್ಳು ಚುಚ್ಚಿದೆ ಎಂದು ತಿಳಿದು ಅವರು ಮನೆಗೆ ಬಂದು ಊಟ ಮಾಡಿ ಮಲಗಿದ್ದಾರೆ.

ಹಾವು ಕಡಿದಿದ್ದು ಗೊತ್ತೇ ಇಲ್ಲ !
ಗಂಗಪ್ಪನಿಗೆ ಹಾವು ಕಡಿದಿರೋದು ಗೊತ್ತೇ ಇರಲಿಲ್ಲ. ಸಂಜೆ ಸರಿ ಸುಮಾರು 5ರಿಂದ 6 ಗಂಟೆ ಸಮಯಕ್ಕೆ ಹಾವು ಕಚ್ಚಿದ ಬಳಿಕ ಮನೆಗೆ ಬಂದು ಊಟ ಮಾಡಿ, ಮಲಗಿ ಬೆಳಗಿನಜಾವ 3 ಗಂಟೆಗೆ ನಿಧಾನಕ್ಕೆ ಹಾವಿನ ವಿಷ ದೇಹಕ್ಕೆ ಹರಡಿದ ಮೇಲೆ ಸುಸ್ತು-ವಾಂತಿ ಎಂದು ಕೂಗಾಡಿದ ಮೇಲೆ ಮನೆಯವರು ನೀರು ಕುಡಿಸಿದ ಮೇಲೆ ಬಾಯಿಯಲ್ಲಿ ನೊರೆ ಬಂದು ಸಾವನ್ನಪ್ಪಿದ್ದಾರೆ.
ಒಂದು ಸಣ್ಣ ನಿರ್ಲಕ್ಷ್ಯದಿಂದ ವ್ಯಕ್ತಿಯ ಪ್ರಾಣವೇ ಹೋಗಿದ್ದು, ಈ ಘಟನೆ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More
Adike Price 27 ಮೇ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.