ಹೊಸನಗರ ; ತೀರ್ಥಹಳ್ಳಿಯ ವಕೀಲರ ಸಂಘದ ಸದಸ್ಯರಾದ ಮಧುಕರ್ ಮಯ್ಯರವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು ಹಲ್ಲೆಯನ್ನು ಖಂಡಿಸಿ ಹೊಸನಗರ ಬಾರ್ ಅಸೋಸಿಯೇಷನ್ ವತಿಯಿಂದ ಬಾರ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಚಂದ್ರಪ್ಪನವರ ನೇತೃತ್ವದಲ್ಲಿ ಒಂದು ದಿನ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಈ ಕೃತ್ಯದಲ್ಲಿ ತೊಡಗಿರುವ ಎಲ್ಲಾ ಆರೋಪಿಗಳನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಸದಸ್ಯರಾದ ಷಣ್ಮುಖಪ್ಪ, ಮಂಡಾನಿ ಗುರುಮೂರ್ತಿ, ಪ್ರಶಾಂತ್, ಉಮೇಶ್, ವಾಲೆಮನೆ ಶಿವಕುಮಾರ್, ಈರಪ್ಪ, ಮಹೇಶ್ ಎಂ.ವೈ, ಗಗ್ಗ ಬಸವರಾಜ್, ಕರ್ಣಕುಮಾರ್, ಮೋಹನ್ ಶೆಟ್ಟಿ, ಮಹಾದೇವಪ್ಪ, ರಾಮಚಂದ್ರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Malnad Times App ಡೌನ್ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

