ಹೊಸನಗರ : ಪಟ್ಟಣದ ಸೌಂದರ್ಯ ಹೆಚ್ಚಿಸಲು ಮರಗಳು ಸಹಕಾರಿ ಆಗಿವೆ. ಆ ದೃಷ್ಟಿಯಿಂದ ಇಲ್ಲಿನ ನನ್ನೂರು ನನ್ನ ಜವಾಬ್ದಾರಿ ಸಂಘಟನೆಯಿಂದ ಸತತ ಹತ್ತು ವರ್ಷಗಳಿಂದ ಗಿಡ ನೆಟ್ಟು ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ಮುಖ್ಯಸ್ಥ ಪೂರ್ಣೇಶ್ ಮಲೇಬೈಲು ತಿಳಿಸಿದರು.
ಹೊಸನಗರ ಪಟ್ಟಣ ಸೇರಿದಂತೆ ಇಲ್ಲಿನ ಪ್ರಮುಖ ರಸ್ತೆ ಬದಿಯಲ್ಲಿ ಪಟ್ಟಣದ ಸೌಂದರ್ಯ ಮತ್ತು ನೆರಳಿಗಾಗಿ ಪ್ರತಿ ವರ್ಷವೂ ಗಿಡಗಳನ್ನು ನೆಡಲಾಗುತ್ತಿದೆ. ಇಲ್ಲಿನ ಸಮಾನ ಮನಸ್ಕರು ಸೇರಿ ‘ನನ್ನೂರು ನನ್ನ ಜವಾಬ್ದಾರಿ’ ಎನ್ನುವ ತಂಡವನ್ನು ಕಟ್ಟಿಕೊಂಡಿದ್ದು ನಾವುಗಳು ಪ್ರತಿ ವರ್ಷ ಗಿಡಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ನಾವೇ ಹೊತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಈ ವೇಳೆ ನನ್ನೂರು ನನ್ನ ಊರು ನನ್ನ ಜವಾಬ್ದಾರಿ ತಂಡದ ಸುರೇಶ್ ಬಿ ಎಸ್, ರಾಘವೇಂದ್ರ ಅರಳಸುರುಳಿ, ರಾಧಾಕೃಷ್ಣ, ಮಾಧವ, ಕೇಶವ್ ಪೊಲೀಸ್, ಕೃಷ್ಣಮೂರ್ತಿ ಅರಳಸುರಳಿ, ಮನೋಹರ್, ಹರೀಶ್ ಮಲೆಬೈಲು, ಹರ್ಷ ಕನ್ನಳ್ಳಿ, ಸುಂದರಣ್ಣ, ಮುಕೇಶ್, ಪ್ರದೀಪ ಕೆ.ಆರ್, ರಂಗನಾಥ ಭಟ್, ಹರ್ಷ ಸುಂದರ್ ದಾಸ್, ಮಂಜುನಾಥ ಭಂಡಾರಿ, ಯೋಗರಾಜ್, ರವಿ ಕುಮಾರ್, ನಾಗೇಶ್ ಹಿಲಕುಂಜಿ, ಹರೀಶ್ ರಾವ್, ದೇವೇಂದ್ರಪ್ಪ, ಉಮೇಶ್ ಪ್ರಿಯಾಂಕಾ, ಸುಧಾಕರ್ ಮಳಲಿ, ಶ್ರೀನಿವಾಸ್ ಕೆಪಿಸಿ, ಜ್ಯೋತಿ ಪೂರ್ಣೇಶ್, ರೇಷ್ಮಾ ಹರೀಶ್, ಶೈಲ ಕೇಶವ, ದಿವ್ಯ ಮಧು, ಸುಶೀಲ ಕೃಷ್ಣ, ರಕ್ಷಿತ ಸುಂದರೇಶ್, ವನಜಾಕ್ಷಿ ದೇವೇಂದ್ರಪ್ಪ, ಸರಿತಾ ಮಂಜುನಾಥ್, ಅಮೃತ ಉಮೇಶ್, ಮಂಜು ಕೇಶವ, ಗುರು ಎರಗಿ ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





