ಪಟ್ಟಣದ ಸೌಂದರ್ಯ ಹೆಚ್ಚಿಸಲು ಮರಗಳು ಸಹಕಾರಿ ; ಪೂರ್ಣೇಶ್ ಮಲೇಬೈಲು

Written by Mahesha Hindlemane

Published on:

ಹೊಸನಗರ : ಪಟ್ಟಣದ ಸೌಂದರ್ಯ ಹೆಚ್ಚಿಸಲು ಮರಗಳು ಸಹಕಾರಿ ಆಗಿವೆ. ಆ ದೃಷ್ಟಿಯಿಂದ ಇಲ್ಲಿನ ನನ್ನೂರು ನನ್ನ ಜವಾಬ್ದಾರಿ ಸಂಘಟನೆಯಿಂದ ಸತತ ಹತ್ತು ವರ್ಷಗಳಿಂದ ಗಿಡ ನೆಟ್ಟು ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ಮುಖ್ಯಸ್ಥ ಪೂರ್ಣೇಶ್ ಮಲೇಬೈಲು ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೊಸನಗರ ಪಟ್ಟಣ ಸೇರಿದಂತೆ ಇಲ್ಲಿನ ಪ್ರಮುಖ ರಸ್ತೆ ಬದಿಯಲ್ಲಿ ಪಟ್ಟಣದ ಸೌಂದರ್ಯ ಮತ್ತು ನೆರಳಿಗಾಗಿ ಪ್ರತಿ ವರ್ಷವೂ ಗಿಡಗಳನ್ನು ನೆಡಲಾಗುತ್ತಿದೆ. ಇಲ್ಲಿನ ಸಮಾನ ಮನಸ್ಕರು ಸೇರಿ ‘ನನ್ನೂರು ನನ್ನ ಜವಾಬ್ದಾರಿ’ ಎನ್ನುವ ತಂಡವನ್ನು ಕಟ್ಟಿಕೊಂಡಿದ್ದು ನಾವುಗಳು ಪ್ರತಿ ವರ್ಷ ಗಿಡಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ನಾವೇ ಹೊತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಈ ವೇಳೆ ನನ್ನೂರು ನನ್ನ ಊರು ನನ್ನ ಜವಾಬ್ದಾರಿ ತಂಡದ ಸುರೇಶ್ ಬಿ ಎಸ್, ರಾಘವೇಂದ್ರ ಅರಳಸುರುಳಿ, ರಾಧಾಕೃಷ್ಣ, ಮಾಧವ, ಕೇಶವ್ ಪೊಲೀಸ್, ಕೃಷ್ಣಮೂರ್ತಿ ಅರಳಸುರಳಿ, ಮನೋಹರ್, ಹರೀಶ್ ಮಲೆಬೈಲು, ಹರ್ಷ ಕನ್ನಳ್ಳಿ, ಸುಂದರಣ್ಣ, ಮುಕೇಶ್, ಪ್ರದೀಪ ಕೆ.ಆರ್, ರಂಗನಾಥ ಭಟ್, ಹರ್ಷ ಸುಂದರ್ ದಾಸ್, ಮಂಜುನಾಥ ಭಂಡಾರಿ, ಯೋಗರಾಜ್, ರವಿ ಕುಮಾರ್, ನಾಗೇಶ್ ಹಿಲಕುಂಜಿ, ಹರೀಶ್ ರಾವ್, ದೇವೇಂದ್ರಪ್ಪ, ಉಮೇಶ್ ಪ್ರಿಯಾಂಕಾ, ಸುಧಾಕರ್ ಮಳಲಿ, ಶ್ರೀನಿವಾಸ್ ಕೆಪಿಸಿ, ಜ್ಯೋತಿ ಪೂರ್ಣೇಶ್, ರೇಷ್ಮಾ ಹರೀಶ್, ಶೈಲ ಕೇಶವ, ದಿವ್ಯ ಮಧು, ಸುಶೀಲ ಕೃಷ್ಣ, ರಕ್ಷಿತ ಸುಂದರೇಶ್, ವನಜಾಕ್ಷಿ ದೇವೇಂದ್ರಪ್ಪ, ಸರಿತಾ ಮಂಜುನಾಥ್, ಅಮೃತ ಉಮೇಶ್, ಮಂಜು ಕೇಶವ, ಗುರು ಎರಗಿ ಇದ್ದರು.

Leave a Comment