5 ಸಾವಿರ ರೂ. ಸಾಲ ಕೊಟ್ಟವನ ಕಾಟ ತಾಳಲಾರದೆ ಆತ್ಮಹತ್ಯೆಗೆ ಶರಣಾದ ವಿಳ್ಯೆದೆಲೆ ವ್ಯಾಪಾರಿ !

Written by Mahesha Hindlemane

Published on:

ಸೊರಬ ; ಆತ ವೀಳ್ಯದೆಲೆ ವ್ಯಾಪಾರಿ. ಹೀಗೆ ಕಷ್ಟ ಬಂದಾಗ 5 ಸಾವಿರ ರೂಪಾಯಿ ಸಾಲ ಪಡೆದಿದ್ದ. ಐದು ಸಾವಿರಕ್ಕೆ ಸಾಕಷ್ಟು ಬಡ್ಡಿಯೂ ಕಟ್ಟಿದ್ದ. ಆದರೆ, 5 ಸಾವಿರಕ್ಕೆ ಬಡ್ಡಿ ಸೇರಿ 9 ಸಾವಿರ ರೂ. ಆಗಿತ್ತು. ಜತೆಗೆ ಸಾಲ ಕೊಟ್ಟವನ ದೌರ್ಜನ್ಯ, ಅವಮಾನದಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ‌.

WhatsApp Group Join Now
Telegram Group Join Now
Instagram Group Join Now

ಹೌದು, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಿರೇಎಡಗೋಡು ಗ್ರಾಮದ ಮಹೇಶಪ್ಪ (48) ವೀಳ್ಯದೆಲೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಹೀಗೆ ಕಷ್ಟ ಬಂದಾಗ ಗ್ರಾಮದ ಒಬ್ಬನಿಂದ 5 ಸಾವಿರ ಕೈ ಸಾಲ ತಗೊಂಡಿದ್ದ. 5 ಸಾವಿರಕ್ಕೆ ಬಡ್ಡಿ ಸೇರಿ 9 ಸಾವಿರ ಸಾಲ ತೀರಿಸಲಾಗದೆ ಸಾಲಗಾರನ ಕಾಟಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಾಲ ಕೊಟ್ಟ ವ್ಯಕ್ತಿ ಬಡ್ಡಿ ಸಮೇತ 9 ಸಾವಿರ ರೂ. ಕೊಡುವಂತೆ ಕೇಳಿದ್ದ. ಸಾಲ ಹಿಂದಿರುಗಿಸದ ಕಾರಣ ಮಹೇಶಪ್ಪ ಬಳಿ ಇದ್ದ ಬೈಕ್ ಅನ್ನು ಎತ್ತಿಕೊಂಡು ಹೋಗಿದ್ದ. ಇದರಿಂದ ಅವಮಾನ ತಾಳಲಾರದೇ ಮಹೇಶಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Comment