ರಿಪ್ಪನ್ಪೇಟೆ ; “ಜೈನ ಧರ್ಮಿಯರಿಗೆ ಇಪ್ಪತ್ತನಾಲ್ಕು ತೀರ್ಥಂಕರರ ಉಪದೇಶಗಳು ಜೈನಾಚಾರದ ಬುನಾದಿಯಾಗಿದೆ. ಇಪ್ಪತ್ತನಾಲ್ಕನೇಯ ತೀರ್ಥಂಕರಾದ ಶ್ರೀ ಮಹಾವೀರ ತೀರ್ಥಂಕರರು ಜ್ಞಾನವೃದ್ಧಿಗಾಗಿ ಖಗೋಳ, ವೈಧ್ಯಕೀಯ, ವಿಜ್ಞಾನ, ಗಣಿತ, ಜ್ಯೋತಿಷ್ಯ, ವಾಸ್ತು ಮುಂತಾದ ವಿಷಯಗಳಲ್ಲಿ ಪಾರಂಗತರಾಗಿ ಮಾನವ ಕ್ಷೇಮ ಕಲ್ಯಾಣ ಮಾರ್ಗವನ್ನು ವೈಜ್ಞಾನಿಕ ದೃಷ್ಠಿಕೋನದಿಂದಲೂ ಸರಳವಾಗಿ ಪ್ರಚುರಪಡಿಸಿರುವರು. ಆಹಾರ-ವಿಹಾರ ಕ್ರಮಗಳನ್ನು, ಪರಿಸರ ಸಂರಕ್ಷಣೆ, ಪ್ರಾಣಿದಯಾ ವಿಚಾರವನ್ನು ಮನಮುಟ್ಟುವಂತೆ ಬೋಧಿಸಿರುವರು. ಹಾಗಾಗಿ ಅವರ ಉಪದೇಶಗಳು ಜೈನ ಪ್ರಾಚೀನ ಗ್ರಂಥಗಳ ಅವಲೋಕನ ಮತ್ತು ನಿತ್ಯ ನಿರಂತರ ಆಚರಿಸಲ್ಪಡುವ ಧರ್ಮಮಾರ್ಗವನ್ನು ನಂದಾದೀಪದಂತೆ ಬೆಳಗಿಸಿದೆ” ಎಂದು ಪರಮಪೂಜ್ಯ ಚತುರ್ಥಪಟ್ಟಾಚಾರ್ಯ ಶ್ರೀ 108 ಸುವಿಧಿಸಾಗರ ಮಹಾರಾಜರು ಮಂಗಳ ಪ್ರವಚನದಲ್ಲಿ ತಿಳಿಸಿದರು.

ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ದಿವ್ಯ ಸಾನಿಧ್ಯ, ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ 2624ನೇ ಶ್ರೀ ಮಹಾವೀರ ತೀರ್ಥಂಕರರ ಜನ್ಮಕಲ್ಯಾಣ ಸುದಿನವನ್ನು ಆಗಮೋಕ್ತ ವಿಧಿ-ವಿಧಾನದಲ್ಲಿ ನೆರವೇರಿಸಲಾಯಿತು.

ಸ್ವಸ್ತಿಶ್ರೀಗಳವರು “ಭಗವಾನ ಮಹಾವೀರ ಸ್ವಾಮಿ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಪ್ರಗತಿಗಾಗಿ ಮಾನವ ಸಮಾಜಕ್ಕೆ ಅತ್ಯುತ್ತಮ ಧರ್ಮಸಂದೇಶ ಸಾರಿದ್ದಾರೆ ಎನ್ನುತ್ತಾ, ಜೈನ ಧರ್ಮದ ಸರ್ವಧರ್ಮ ಸಮನ್ವಯತೆ, ಪ್ರಾಣಿದಯೆ, ದಿನಚರ್ಯೆಯಲ್ಲಿ ಸಾಧನಾ ಮಾರ್ಗಗಳನ್ನು ಶ್ರೀ ಮಹಾವೀರರು ನಿರ್ದೇಶಿಸಿರುವುದನ್ನು ನಾವೆಲ್ಲರು ಪರಿಪಾಲಿಸೋಣ” ಎಂದರು.

ಮುನಿಶ್ರೀ ಗುಲಾಭಭೂಷಣರು, ಆರ್ಯಿಕೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭಗವಾನ ಮಹಾವೀರ ಜಯಂತಿ ಸಂದರ್ಭದಲ್ಲಿ ಶ್ರೀ ಮಹಾವೀರ ಸ್ವಾಮಿ ಜಿನಬಿಂಬದ ರಜತ ಪಲ್ಲಕ್ಕಿಯಲ್ಲಿ ಶೋಭಾಯಾತ್ರೆ, ಅರ್ಘ್ಯ ವಿಧಾರ್ಚನೆ, ನಾಮಕರಣ ವಿಧಿ-ವಿಧಾನಗಳು ಜರುಗಿದರು.

ಜಯ ಮಹಾವೀರ, ಅಹಿಂಸಾ ಪರಮೋಧರ್ಮ, ಮಹಾವೀರ ಕೀ ಜೈ ಜೈಕಾರಗಳು, ಜಿನಭಜನೆ ಸುಶ್ರಾವ್ಯವಾಗಿತ್ತು.

ಹೊಂಬುಜ ಶ್ರೀ ಪದ್ಮಾವತಿ ಮಹಿಳಾ ಮಂಡಲ, ಊರ ಪರವೂರ ಭಕ್ತರು ಜಿನಭಜನೆ, ಆರಾಧನೆಯಲ್ಲಿ ಪಾಲ್ಗೊಂಡರು.
ಶ್ರೀ ಪದ್ಮರಾಜ ಹಾಗೂ ಸಹ ಪುರೋಹಿತರು ಪೂಜಾ ವಿಧಿಯನ್ನು ಸ್ತ್ರೋತ್ರ ಪಠಣದ ಮೂಲಕ ನೆರವೇರಿಸಿದರು.
Author Profile

- ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.
Latest entries
ShivamoggaJune 3, 2025ಸಂಪತ್ತಿನೊಂದಿಗೆ ಒಂದಿಷ್ಟಾದರೂ ಧರ್ಮ ಪ್ರಜ್ಞೆ ಅವಶ್ಯಕ ; ರಂಭಾಪುರಿ ಜಗದ್ಗುರುಗಳು
RipponpeteJune 3, 2025ಅಮ್ಮನಘಟ್ಟ ಶ್ರೀಜೇನುಕಲ್ಲಮ್ಮ ದೇವಸ್ಥಾನದ 108 ಮೆಟ್ಟಿಲುಗಳ ನಿರ್ಮಾಣಕ್ಕೆ ಸಂಸದ ಬಿ.ವೈ. ರಾಘವೇಂದ್ರ ಶಿಲನ್ಯಾಸ
RipponpeteJune 2, 2025ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀಗಳು ಶಿವಮೊಗ್ಗ ಬೆಕ್ಕಿನಕಲ್ಮಠಕ್ಕೆ ಭೇಟಿ
RipponpeteJune 1, 2025ಶ್ರುತಪಂಚಮಿ ಆಚರಣೆ | ಜೈನಧರ್ಮ ಸಿದ್ಧಾಂತಗಳು ಜೀವನ ಮೌಲ್ಯಗಳನ್ನು ವರ್ಧಿಸುತ್ತದೆ ; ಹೊಂಬುಜ ಶ್ರೀಗಳು