ರಿಪ್ಪನ್ಪೇಟೆ ; ಪಟ್ಟಣ ವ್ಯಾಪ್ತಿಯಲ್ಲಿ ವಾಹನಗಳ ದಟ್ಟಣೆಯಿಂದಾಗಿ ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆ ಅಧಿಕಗೊಳ್ಳುತ್ತಲೇ ಇದ್ದರೂ ಕೂಡಾ ವಾಹನಗಳ ಚಾಲಕರು ಪಡಬಾರದ ಕಷ್ಟ ಪಡುವಂತಾಗಿದ್ದರೆ ಪಾದಚಾರಿಗಳು ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಗರ್ಭಿಣಿಯರು, ಅನಾರೋಗ್ಯ ಪೀಡಿತರು ರಸ್ತೆ ದಾಟುವುದೇ ಕಷ್ಟಕರವಾಗಿದೆ ಎಂದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುವಂತಾಗಿದೆ.
ಇಲ್ಲಿನ ಸಾಗರ-ತೀರ್ಥಹಳ್ಳಿ ಮಾರ್ಗದ ಎರಡು ರಸ್ತೆಗಳು ತಲಾ ಒಂದೊಂದು ಕಿ.ಮೀ.ದೂರ ದ್ವಿಪಥ ರಸ್ತೆಯಾಗಿ ಮೇಲ್ದರ್ಜೆ ಹೊಂದಿ ಅಭಿವೃದ್ದಿ ಪಡಿಸಲಾಗಿದ್ದು ಇನ್ನೂ ಸೈಡ್ ಮೆಟ್ಲಿಂಗ್ ಕಾಮಗಾರಿ ಆರಂಭಿಕ ಹಂತದಲ್ಲಿ ಕಳಪೆಯಾಗಿದ್ದು ಸ್ಥಳೀಯ ಶಾಸಕ ಗೋಪಾಲಕೃಷ್ಣ ಬೇಳೂರು ಗಮನಕ್ಕೆ ತರುತ್ತಿದ್ದಂತೆ ತಕ್ಷಣ ಕಾಮಗಾರಿ ಗುತ್ತಿಗೆದಾರನಿಗೆ ಕೆಲಸ ನಿಲ್ಲಿಸಿ ಅದನ್ನು ಸರಿಪಡಿಸಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಖಡಕ್ ವಾರ್ನಿಂಗ್ ಮಾಡಿದರ ಮೇರೆಗೆ ಇಂಟರ್ಲಾಕ್ ಅಳವಡಿಕೆಯ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿ ಕಾಮಗಾರಿಗೆ ಮಳೆ ಅಡ್ಡಿಯಿಂದಾಗಿ ಕಾಮಗಾರಿ ಅಲ್ಲಿಗೆ ನಿಂತಿತು. ಆದರೆ ಹೊಸನಗರ-ಶಿವಮೊಗ್ಗ ರಸ್ತೆಯ ವಿನಾಯಕ ವೃತ್ತದಲ್ಲಿ ತಲಾ ಒಂದೊಂದು ಕಿ.ಮೀ ರಸ್ತೆ ಅಗಲಿಕರಣ ಕಾಮಗಾರಿಯೊಂದಿಗೆ ದ್ವಿಪಥ ರಸ್ತೆ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆ ಶಾಸಕರ ಮನದಲ್ಲಿದ್ದು ಈ ವರ್ಷದಲ್ಲಿ ಸರ್ಕಾರದಿಂದ ಆನುದಾನ ತರುವ ಭರವಸೆ ಹೊಂದಲಾದರೂ ಕೂಡಾ ಅದು ಇನ್ನೂ ಮರೀಚಿಕೆಯಾಗಿಯೇ ಉಳಿದಿರುವಾಗ ಟ್ರಾಫಿಕ್ ಸಮಸ್ಯೆಯಿಂದ ದಿನನಿತ್ಯ ಸಾರ್ವಜನಿಕರುಗಳು ಮಾತ್ರ ಕಿರಿಕಿರಿ ಅನುಭವಿಸುವುದು ತಪ್ಪಿಲ್ಲ.
ಈ ಹಿಂದೆ ಜಿಲ್ಲಾಧಿಕಾರಿಗಳು ರಿಪ್ಪನ್ಪೇಟೆ ನಾಲ್ಕು ಸಂಪರ್ಕದ ಶಿವಮೊಗ್ಗ, ಹೊಸನಗರ, ಸಾಗರ, ತೀರ್ಥಹಳ್ಳಿ ಮಾರ್ಗದ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗಾಗಿ ಒಂದೊಂದು ದಿನ ವಾಹನಗಳ ನಿಲುಗಡೆಗಾಗಿ ಅದೇಶ ಹೊರಡಿಸಿದ್ದು ನಂತರದಲ್ಲಿ ಠಾಣೆಗೆ ವರ್ಗಾವಣೆಯಾಗಿ ಬಂದಂತಹ ಪಿಎಸ್ಐ, ಜಿಲ್ಲಾಧಿಕಾರಿಗಳ ಆದೇಶವನ್ನು ಮಾನ್ಯ ಮಾಡಿ ನಾಲ್ಕು ಸಂಪರ್ಕ ರಸ್ತೆಯಲ್ಲಿ ದಿನ ಬಿಟ್ಟು ದಿನ ಒಂದೊಂದು ಸೈಡ್ ವಾಹನ ನಿಲುಗಡೆ ಮಾಡುವ ನಾಮಫಲಕವನ್ನು ಅಳವಡಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿ ನಂತರದಲ್ಲಿ ಟ್ರಾಫಿಕ್ ಸಮಾ ಹಳೆ ಗಂಡನಂತಾಗಿರುವುದರ ಬಗ್ಗೆ ಸಾರ್ವಜನಿಕರಲ್ಲಿ ಅಪಹಾಸ್ಯಕ್ಕೆ ಒಳಗಾಗುವಂತಾಗಿದೆ.
ಒಟ್ಟಾರೆಯಾಗಿ ಇತ್ತೀಚೆಗೆ ಬಕ್ರೀದ್ ಹಬ್ಬದ ಪೊಲೀಸ್ ಶಾಂತಿ ಸಮಿತಿ ಸಭೆಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಈ ವಿಚಾರವಾಗಿ ಪತ್ರಕರ್ತರು ಪ್ರಶ್ನಿಸಿದಾಗ ಪಿಎಸ್ಐ ಈಗಾಗಲೇ ತೀರ್ಥಹಳ್ಳಿ-ಸಾಗರ ಎರಡು ರಸ್ತೆಗಳು ಡಿವೈಡರ್ ಅಳವಡಿಕೆಯೊಂದಿಗೆ ದ್ವಿಪಥ ರಸ್ತೆಯಾಗಿ ನಿರ್ಮಾಣವಾಗಿದ್ದು ಈ ಎರಡು ರಸ್ತೆಯಲ್ಲಿ ಸಂಚಾರದ ಸಮಸ್ಯೆ ಉದ್ಬವವಾಗದು ಅದರೆ ಶಿವಮೊಗ್ಗ-ಹೊಸನಗರ ರಸ್ತೆಗಳು ಟ್ರಾಫಿಕ್ ಸಮಸ್ಯೆ ಇರುವುದು ನನ್ನ ಗಮನಕ್ಕೆ ಇದೆ ಸಿಬ್ಬಂದಿಗಳ ಸಮಸ್ಯೆ ಜೊತೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು ಅತಿಶೀಘ್ರದಲ್ಲಿ ಆದೇಶ ಬರುವ ನಿರೀಕ್ಷೆಯಲ್ಲಿದ್ದು ಆದೇಶ ಬರುತ್ತಿದ್ದಂತೆ ರಿಪ್ಪನ್ಪೇಟೆಯ ಪ್ರಮುಖ ಹೊಸನಗರ-ಶಿವಮೊಗ್ಗ ರಾಜ್ಯ ಹೆದ್ದಾರಿಯ ರಸ್ತೆಯಲ್ಲಿ ವಾಹನದಟ್ಟಣೆಯಿಂದ ಉಂಟಾಗಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಲ್ಪಿಸಲು ಅಲ್ಲಲ್ಲಿ ನಾಮಫಲಕವನ್ನು ಅಳವಡಿಸಿ ಸಿಬ್ಬಂದಿಗಳನ್ನು ನೇಮಿಸಿ ಸಾರ್ವಜನಿಕರಿಗಾಗುತ್ತಿರುವ ಕಿರಿಕಿರಿಯನ್ನು ಪರಿಹರಿಸುವುದಾಗಿ ತಿಳಿಸಿದ್ದಾರೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.