ಹೊಸನಗರ: ತಾಲೂಕಿನ ಭೂ ನ್ಯಾಯ ಮಂಡಳಿ ನೂತನ ಸದಸ್ಯರಾಗಿ ಅಮೃತ ಗ್ರಾಮದ ಹೆಚ್.ಎಂ.ಬಷೀರ್ ಅಹಮದ್, ಪುರಪ್ಪೆಮನೆ ಗ್ರಾಮದ ಕಡೆಕಲ್ ನಾಗರಾಜ್, ಬಲಗೋಡಿ ಗ್ರಾಮದ ಬಿ.ಕೆ.ವೆಂಕಟೇಶ್ ಸಾಮಾನ್ಯ ವರ್ಗದ ಸದಸ್ಯರಾಗಿ ಹಾಗೂ ಕಚ್ಚಿಗೆಬೈಲು ವಾಸಿ ಕುಮಾರಿ ಕೆ.ವೈ. ನಾಗವೇಣಿ ಪರಿಶಿಷ್ಟ ಜಾತಿ ಸದಸ್ಯೆಯಾಗಿ ನೇಮಕಗೊಂಡಿದ್ದಾರೆ.
ನೂತನ ಸದಸ್ಯರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಕಾರ್ಯದರ್ಶಿ ಡಿ.ಎಂ.ಸದಾಶಿವ ಶ್ರೇಷ್ಠಿ ಸಹಿತ ಹಲವಾರು ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ಅಭಿನಂದಿಸಿದ್ದಾರೆ.
ಈ ವೇಳೆ ಪ್ರಮುಖರಾದ ಬಗರ್ ಹುಕುಂ ಸಮಿತಿ ಸದಸ್ಯ ನೆರಲೆ ಸ್ವಾಮಿ, ವೀರೇಶ್, ಹೆದ್ದಾರಿಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸಚಿನ್ ಗರ್ತಿಕೆರೆ, ಪ್ರವೀಣ್ ಬೇಕರಿ, ಜಯನಗರ ಗುರು, ಉಬೇದ್ ಸಾಬ್, ವಿಜಯ್ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಇಕ್ಬಲ್ ಉಪಸ್ಥಿತರಿದ್ದರು.
ತಾಳಗುಪ್ಪ – ಯಶವಂತಪುರ ನಡುವೆ ಮತ್ತೆ ಎರಡು ವಿಶೇಷ ರೈಲುಗಳು: ಆಗಸ್ಟ್ 1, 2, 8, 9ರಂದು ಸಂಚಾರ
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.