ಸಾಗರ

ಸಾಗರ: ತಾಯಿ-ಮಕ್ಕಳ ಆಸ್ಪತ್ರೆಯಿಂದ ಜನರೇಟರ್ ಕಳ್ಳತನ – ಇಬ್ಬರು ಆರೋಪಿಗಳು ಬಂಧನ, ₹92,000 ಮೌಲ್ಯದ ಜನರೇಟರ್ ವಶ

ಸಾಗರ ಪಟ್ಟಣದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಜನರೇಟರ್ ಕಳ್ಳತನ ಪ್ರಕರಣವನ್ನು ಸಾಗರ ನಗರ ಪೊಲೀಸ್ ಠಾಣೆ ಬಗೆಹರಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ₹92,000 ಮೌಲ್ಯದ ಜನರೇಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆ ವಿವರ:

ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಆಸ್ಪತ್ರೆಯಲ್ಲಿ ಜನರೇಟರ್ ಕಳ್ಳತನವಾದ ಕುರಿತು ಪ್ರಕರಣ ದಾಖಲಾತಿಯಾದ ಬಳಿಕ, ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ.ಕೆ. ಅವರ ಮಾರ್ಗದರ್ಶನದಲ್ಲಿ ತನಿಖೆ ಆರಂಭಿಸಲಾಯಿತು. ಅಧೀಕ್ಷಕರಾದ ಅನಿಲ್ ಕುಮಾರ್ ಬೂಮರೆಡ್ಡಿ ಮತ್ತು ಕಾರ್ಯಪ್ಪ ಅವರ ನಿರ್ದೇಶನದಂತೆ ಹೆಚ್ಚಿನ ಗಮನ ನೀಡಲಾಯಿತು.

ತನಿಖಾ ಕಾರ್ಯ:

ಸಾಗರ ಉಪವಿಭಾಗದ ಡಿವೈಎಸ್ಪಿ ಗೋಪಾಲಕೃಷ್ಣ ಟಿ. ನಾಯಕ್ ಹಾಗೂ ಸಾಗರ ನಗರ ಠಾಣೆಯ ಪಿಐ ಪುಲ್ಲಯ್ಯ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಯಿತು. ಪಿಎಸ್‌ಐ ನಾಗರಾಜ್ ಟಿ.ಎಂ ಹಾಗೂ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ಯೋಗೇಶ್, ಮೆಹಬೂಬ್ ಅವರು ಈ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಬಂಧಿತರು:

  1. ಶರಣ್ – Sticker cutting ಕೆಲಸ ಮಾಡಿಕೊಂಡಿದ್ದ, ಸಾಗರ ಟೌನ್ ನಿವಾಸಿ
  2. ಸುನಿಲ್ – ಆಸ್ಪತ್ರೆಯಲ್ಲೇ ಸೂಪರ್‌ಡೆಂಟ್ ಆಗಿ ಕೆಲಸ ಮಾಡುತ್ತಿದ್ದ

ಬಂಧಿತರಿಂದ ₹92,000 ಮೌಲ್ಯದ ಜನರೇಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

Leave a Comment