ಚಿನ್ನದ ನಾಣ್ಯ ಕೊಡುತ್ತೇವೆಂದು ನಂಬಿಸಿ ₹2 ಲಕ್ಷ ವಂಚನೆ – ಮಂಗಳೂರಿನ ವ್ಯಕ್ತಿಗೆ ಶಿವಮೊಗ್ಗದಲ್ಲಿ ಮೋಸ

Written by Koushik G K

Published on:

ಶಿವಮೊಗ್ಗ: ಚಿನ್ನದ ನಾಣ್ಯ ನೀಡುತ್ತೇವೆ ಎಂಬ ನಂಬಿಕೆಯ ಮೇಲೆ ಮಂಗಳೂರಿನ ವ್ಯಕ್ತಿಯೊಬ್ಬರು ₹2 ಲಕ್ಷ ರೂ. ವಂಚನೆಗೊಳಗಾದ ಘಟನೆ ವರದಿಯಾಗಿದೆ. ಈ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಚೂಡಯ್ಯ ಆಚಾರ್ಯ (67) ಎಂಬ ಮಂಗಳೂರಿನ ವ್ಯಕ್ತಿಗೆ ಅನಾಮಧೇಯ ವ್ಯಕ್ತಿಯೊಬ್ಬರು ಕರೆ ಮಾಡಿ,“ನೆಲದಲ್ಲಿ ಚಿನ್ನದ ನಾಣ್ಯ ಸಿಕ್ಕಿವೆ, ಅವು ಮಾರಾಟಕ್ಕೆ ಇವೆ” ಎಂದು ನಂಬಿಸಿದ್ದಾನೆ.ಇದನ್ನ ನಂಬಿದ ಆಚಾರ್ಯ, ವಂಚಕರ ಸೂಚನೆಯಂತೆ ಜುಲೈ 30, 2025 ರಂದು ಬೆಳಗ್ಗೆ 6:30 ಗಂಟೆಗೆ ಶಿವಮೊಗ್ಗದ ಹೊರವಲಯ ಈಶ್ವರ ವನದ ಬಳಿ ಹೋಗಿದ್ದಾರೆ.

ವಂಚಕನು ತನ್ನೊಂದಿಗೆ ಮಹಿಳೆಯೊಬ್ಬರನ್ನು ಕರೆದುಕೊಂಡು ಬಂದು, ಚೀಲವೊಂದರಲ್ಲಿ ನಾಣ್ಯವಿಟ್ಟು, ಆಚಾರ್ಯರಿಂದ ₹2 ಲಕ್ಷ ಪಡೆದುಕೊಂಡಿದ್ದಾನೆ.ಅದಾದ ನಂತರ:ಇನ್ನೊಬ್ಬ ಬೈಕ್‌ ನವನು ಸ್ಥಳಕ್ಕೆ ಬಂದು ಬ್ಯಾಗ್ ಚೆಕ್ ಮಾಡಬೇಕೆಂದು ಬೆದರಿಕೆ ನೀಡಿದ್ದಾನೆ ಬಳಿಕ ವಂಚಕರು ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಎಲ್ಲ ಮಾಹಿತಿ ಚೂಡಯ್ಯ ಆಚಾರ್ಯ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತನಿಖೆ ಪ್ರಗತಿಯಲ್ಲಿದೆ:

ವಿನೋಬನಗರ ಪೊಲೀಸರು ಪ್ರಕರಣ ದಾಖಲಿಸಿ, ವಂಚಕರ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ, ಕರೆ ದಾಖಲಾತಿ ಸೇರಿದಂತೆ ತಾಂತ್ರಿಕ ಆಧಾರಗಳನ್ನೂ ಬಳಸಲಾಗುತ್ತಿದೆ.

ಸಾರ್ವಜನಿಕರಿಗೆ ಎಚ್ಚರಿಕೆ:

ಈ ರೀತಿಯ ವಂಚನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ:

“ಅನಾಮಧೇಯ ವ್ಯಕ್ತಿಗಳ ಕರೆಗಳ ಮೇಲೆ ನಂಬಿಕೆ ಇಡುವದನ್ನು ತಪ್ಪಿಸಿ. ಚಿನ್ನ, ಹಣ, ಆಸ್ತಿ ಸಂಬಂಧಿತ ವ್ಯವಹಾರಗಳನ್ನು ನೇರವಾಗಿ ನಿರ್ವಹಿಸದಿರಿ.”

ಜೋಗ್ ಫಾಲ್ಸ್‌ನ ಅಪಾಯದ ಪ್ರದೇಶದಲ್ಲಿ ವೀಡಿಯೋ ಮಾಡಿದ ಯೂಟ್ಯೂಬರ್‌ ವಿರುದ್ಧ ಎಫ್‌ಐಆರ್

Leave a Comment