ವೈಭವದಿಂದ ಜರುಗಿದ ಹಳುವಳ್ಳಿ ಶ್ರೀ ಸುಬ್ರಹ್ಮಣೈಶ್ವರ ಸ್ವಾಮಿ ರಥೋತ್ಸವ

Written by Mahesha Hindlemane

Published on:

ಕಳಸ ; ಇತಿಹಾಸ ಪ್ರಸಿದ್ಧ ಹಳುವಳ್ಳಿ ಶ್ರೀಮಹಾಗಣೇಶ್ವರ ಸಮೇತ ಶ್ರೀ ಸುಬ್ರಹ್ಮಣೈಶ್ವರ ಸ್ವಾಮಿಯವರ ರಥೋತ್ಸವವು ಬುಧವಾರ ಅತ್ಯಂತ ಸಡಗರ ಸಂಭ್ರಮದಿಂದ ನೆರವೇರಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮಧ್ಯಾಹ್ನ ಮಂಗಳಾರತಿ ಮುಗಿದ ಬಳಿಕ ಸುಬ್ರಹ್ಮಣ್ಯ ದೇವರ ವಿಗ್ರಹವನ್ನು ಹೊತ್ತುಕೊಂಡು ಛತ್ರಿ, ಚಾಮರ, ಮಂಗಳ ವಾದ್ಯಗಳೊಂದಿಗೆ ದೇವಸ್ಥಾನದಲ್ಲಿ ಸುತ್ತು ಸೇವೆ ನಡೆಸಿ, ನಂತರ ಸಿಂಗಾರಗೊಂಡ ಬ್ರಹ್ಮ ರಥದಲ್ಲಿ ಇಟ್ಟು ಪೂಜಿಸಲಾಯಿತು.

ರಥೋತ್ಸವಕ್ಕೂ ಮುನ್ನ ರಥೋತ್ಸವ ನಡೆಯುವ ಮೊದಲು ಬ್ರಹ್ಮ ರಥದ ನೇರಕ್ಕೆ ಬಾನೆತ್ತರದಲ್ಲಿ ಗರುಡ ಮೂರು ಬಾರಿ ಪ್ರದಕ್ಷಿಣೆ ಹಾಕಿತು. ರಥೋತ್ಸವ ಸಾಗುತ್ತಿದ್ದಂತೇ ಭಕ್ತಾದಿಗಳು ತಮ್ಮ ಹರಕೆಯಂತೆ ತಾವು ಬೆಳೆದ ಕಾಳುಮೆಣಸು, ಏಲಕ್ಕಿ, ಅಡಿಕೆ, ಕಾಫಿ ಬೀಜ ಇನ್ನಿತರೆ ದವಸ ಧಾನ್ಯಗಳನ್ನು ರಥಕ್ಕೆ ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ನೆರೆದ ಸಾವಿರಾರು ಭಕ್ತಾಧಿಗಳು ರಥ ಎಳೆದು ಕೃತಾರ್ಥರಾದರು ಹಾಗೂ ಭಕ್ತರು ಕಷ್ಟಕಾಲಕ್ಕೆ ಹರಕೆ ಹೊತ್ತುಕೊಂಡ ಹಾವಿನ ಹೆಡೆ, ಹಾವಿನ ಮೊಟ್ಟೆ, ಮಗು ತೊಟ್ಟಿಲು ಮುಂತಾದ ಬೆಳ್ಳಿ ವಸ್ತುಗಳನ್ನು ಹರಕೆ ರೂಪದಲ್ಲಿ ದೇವರಿಗೆ ಅರ್ಪಿಸಿದರು.

ಮಂಗಳವಾರ ಗಣಪತಿ ಹೋಮ, ದಿಂಡಿ ಉತ್ಸವದ ಮೂಲಕ ಧಾರ್ಮಿಕ ವಿಧಿಗಳು ಆರಂಭಗೊಂಡಿದ್ದವು. ಬುಧವಾರ ಬೆಳಿಗ್ಗೆಯಿಂದಲೇ ದೇಗುಲಕ್ಕೆ ಭಕ್ತರ ದಂಡು ಹರಿದು ಬಂದಿತ್ತು. ಜಾತ್ರೆಯ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ರಥೋತ್ಸವ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತಾರು ಆಗಮಿಸಿದ್ದರು.

ವರದಿ : ಪ್ರೀತಮ್ ಹೆಬ್ಬಾರ್

Leave a Comment