ರಿಪ್ಪನ್ಪೇಟೆ ; ಸ್ಲೇಟು, ಬಳಪ, ಪೆನ್ನು, ಪೆನ್ಸಿಲ್ ಹಿಡಿಯುವ ಕೈಗಳು ಇಂದು ತಕ್ಕಡಿ ಹಿಡಿಯುವ ಮೂಲಕ ದಿನಸಿ ತರಕಾರಿ, ಐಸ್ಕ್ರೀಮ್ ಆರೋಗ್ಯಕರ ಪಾನೀಯ, ರಾಗಿ, ಹಾಲು, ರುಚಿಕರ ಪಾನಿಪೂರಿ, ಸಮೋಸ ಫ್ರೂಟ್ಸಲಾಡ್, ಬಜ್ಜಿ, ಬಟ್ಟೆ ಅಂಗಡಿಯನ್ನು ನಡೆಸುವುದರೊಂದಿಗೆ ಮಕ್ಕಳ ಸಂತೆ ಜನಪ್ರಿಯತೆಗೊಳಿಸುವುದರೊಂದಿಗೆ ಖರೀದಿಯಲ್ಲಿ ಸಹ ಪೋಷಕವರ್ಗ ತಮ್ಮ ಮಕ್ಕಳ ಸಂತೆಯಲ್ಲಿ ಜಮಾಯಿಸಿ ಗಮನಸೆಳೆದ ದೃಶ್ಯ ಕಾಣುವಂತಾಯಿತು. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಮಕ್ಕಳು ಕಬ್ಬಿನ ಆಲೆಮನೆಯನ್ನು ನಡೆಸುವುದರೊಂದಿಗೆ ಎಲ್ಲರ ಗಮನ ಸೆಳೆದರು.
ಕೋಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾದ `ಮಕ್ಕಳ ಸಂತೆ’ಯಲ್ಲಿ ವಿದ್ಯಾರ್ಥಿಗಳು ಉತ್ಸುಕತೆಯಿಂದ ವಿನೂತನ ಹೆಸರಿನಲ್ಲಿ ಆಂಗಡಿಗಳನ್ನು ತೆರೆದು ತಾಜಾ ತರಕಾರಿ, ಮೊಳಕೆ ಕಟ್ಟಿದ ಹೆಸರುಕಾಳು, ಪೋಷಕಾಂಶದ ಸೊಪ್ಪು ಇನ್ನಿತರ ದಿನಸಿ ಸಾಮಾನುಗಳನ್ನು ಮಾರಾಟ ಮಾಡಿದರು.
ಶಾಲಾ ಮಕ್ಕಳ ಸಂತೆಯ ಕಾರ್ಯಕ್ರಮವನ್ನು ಕೋಡೂರು ಗ್ರಾಮ ಪಂಚಾಯಿತ್ ನಿಕಟಪೂರ್ವ ಅಧ್ಯಕ್ಷ ಜಯಪ್ರಕಾಶಶೆಟ್ಟಿ ತರಕಾರಿಯನ್ನು ಖರೀದಿಸುವ ಮೂಲಕ ಉದ್ಘಾಟಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ ವೈ, ಪಂಚಾಯಿತ್ ಪಿಡಿಒ ನಾಗರಾಜ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ಶಿಕ್ಷಕಿ ಲಕ್ಷ್ಮಿದೇವಿ, ನಾಗರತ್ನ, ಅಂಬಿಕಾ, ರುಹಿನಾತಾಜ್, ಸುಧಾ, ಮಾನಸ, ಪ್ರದೀಪ್ ಇನ್ನಿತರರು ಪಾಲ್ಗೊಂಡಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





