ಹಸಿದವರಿಗೆ ಅನ್ನ ನೀಡುವುದರಿಂದ ಪುಣ್ಯದ ಫಲ ಸಿಗುತ್ತದೆ ; ಸೈಮನ್ ಹೊರರ್ಟ

Written by Mahesha Hindlemane

Published on:

ಹೊಸನಗರ ; ಹಸಿದವರಿಗೆ ಅನ್ನಭಾಗ್ಯ ಕಲ್ಪಿಸಿದರೇ ಪುಣ್ಯದ ಫಲ ಸಿಗುತ್ತದೆ ಎಂದು ಹೊಸನಗರ ಚರ್ಚ್‌ನ ಧರ್ಮಗುರು ಸೈಮನ್ ಹೊರರ್ಟ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಡಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿಯವರ ಪ್ರೇರಣೆಯಲ್ಲಿ ಹೊಸನಗರದ ಸ್ತ್ರೀಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಚೈತನ್ಯ ಅನ್ನ ಕಾರ್ಯಕ್ರಮದಲ್ಲಿ ಹಸಿದವರಿಗೆ ಅನ್ನ ಎಂಬ ಅರ್ಥಪೂರ್ಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಪಂಚದಲ್ಲಿಯೇ ಅನ್ನ ದಾನಕ್ಕಿಂತ ಶ್ರೇಷ್ಠ ದಾನ ಬೇರೊಂದಿಲ್ಲ. ಪ್ರತಿಯೊಬ್ಬರು ತಾನು ದುಡಿದ ಸ್ವಲ್ಪ ಹಣದಲ್ಲಿ ಅನ್ನದಾನ ಮಾಡಿ ಪುಣ್ಯದ ಫಲ ಸಿಗುವಂತೆ ಮಾಡಿಕೊಳ್ಳಿ. ಹಸಿದವರಿಗೆ ತಮ್ಮ ಕೈಯಲ್ಲಾದ ಮಟ್ಟಿಗೆ ಅನ್ನ ಹಾಕಿ ತಾವು ಬೆಳೆಯುವುದರ ಜೊತೆಗೆ ಇನ್ನೊಬ್ಬರನ್ನು ಬೆಳೆಸುವ ಗುಣ ಬೆಳೆಸಿಕೊಳ್ಳಿ ಎಂದರು.

ಸಾರ್ವಜನಿಕ ಆಸ್ಪತ್ರೆಯ ಒಳ ಹಾಗೂ ಹೊರ ರೋಗಿಗಳಿಗೆ ಹಾಗೂ ಸಾರ್ವಜನಿಕರು ಸುಮಾರು 400 ಜನರಿಗೆ ಅನ್ನ ವಿತರಿಸಲಾಯಿತು.

ಚೈತನ್ಯ ಅನ್ನ ಕಾರ್ಯಕ್ರಮ ಹಸಿದವರಿಗೆ ಅನ್ನ ಬಳಸುವ ಸಂದರ್ಭದಲ್ಲಿ ಹೋಲಿ ರೇಡಿಮರ್ ಮುಖ್ಯ ಶಿಕ್ಷಕಿ ವಿಲ್ಮಾ ಪಿಂಟೂ, ಸಿಸ್ಟರ್ ರೋಸಿಟಾ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಲಿಂಗರಾಜ್, ಡಾ. ಹೇಮಾಂತ್, ಹೊಸನಗರ ವಲಯ ಸಂಯೋಜನಾಧಿಕಾರಿ ಮಧುಸೂದನ್ ಹಾಗೂ ಸ್ತ್ರೀಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

Leave a Comment