ಹೊಸನಗರ ; ಪಟ್ಟಣದ ಬಸ್ ನಿಲ್ದಾಣದ ಸಮೀಪ ಇರುವ ಕಾರ್ಗಲ್ ಕಾಂಪ್ಲೆಕ್ಸ್ ಮೇಲ್ಮಹಡಿಯಲ್ಲಿ ಎಹೆಚ್ ಚಿಟ್ಸ್ ನ ಗ್ರಾಹಕರ ಸೇವಾ ಕೇಂದ್ರಕ್ಕೆ ಮಾಜಿ ಶಾಸಕ ಬಿ.ಸ್ವಾಮಿರಾವ್ ಚಾಲನೆ ನೀಡಿದರು.
ಅಗತ್ಯ ಸಮಯದಲ್ಲಿ ನಾವು ಹೂಡಿದ ಹಣವೇ ಆಪತ್ಕಾಲದಲ್ಲಿ ವರವಾಗಿ ನಮ್ಮ ಸೇರುತ್ತದೆ. ಇದಕ್ಕೆ ಎಹೆಚ್ ಚಿಟ್ಸ್ ಸೇವಾಕೇಂದ್ರ ಉತ್ತಮ ಉದಾಹರಣೆ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ವೇಳೆ ಪ್ರಮುಖರಾದ ಎನ್.ಆರ್. ದೇವಾನಂದ್, ಉದ್ಯಮಿ ಪೂರ್ಣೇಶ್ ಮಲೇಬೈಲ್, ಆಡಿಟರ್ ಮಧುಸೂದನ್ ನಾವಡ ಸೇರಿದಂತೆ ಹಲವರು ಹಾಜರಿದ್ದು ಮಾತನಾಡಿ ಶುಭ ಕೋರಿದರು.
ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ತೀರ್ಥಹಳ್ಳಿ ತಾಲ್ಲೂಕು ಬಿಜೆಪಿ ಕಾರ್ಯದರ್ಶಿ ನವೀನ್ ಹೆದ್ದೂರ್, ಪೂರ್ಣೇಶ್ ಕೋಣಂದೂರು, ಅಂಜೂರ ಕುಡುಮಲ್ಲಿಗೆ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹರೀಶ್, ದಿನೇಶ್ ಕುಂಟಿಗೆ ಉಪಸ್ಥಿತರಿದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.
9acmhe