ಸಂಭ್ರಮದೊಂದಿಗೆ ಸಂಪನ್ನಗೊಂಡ ಗುರುಸಾರ್ವಭೌಮರ ಆರಾಧನಾ ಮಹೋತ್ಸವ
ರಿಪ್ಪನ್ಪೇಟೆ: ಇಲ್ಲಿನ ಬೈರಾಪುರ ಗ್ರಾಮದ ಕಿರುಮಂತ್ರಾಲಯ ಎಂದೇ ಹೆಸರಾಗಿರುವ ಶ್ರೀಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಮತ್ತು ಗರ್ತಿಕೆರೆ ಶ್ರೀರಾಘವೇಂದ್ರ ಸ್ವಾಮಿ ಮಠ ಹಾಗೂ ಹರತಾಳು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಇಂದು ಸಂಭ್ರಮ ಸಡಗರದೊಂದಿಗೆ ಶ್ರೀ ಗುರು ಸಾರ್ವಭೌಮರ 352ನೇ ಆರಾಧನಾ ಮಹೋತ್ಸವವು ಸುಸಂಪನ್ನಗೊಂಡಿತು.
ಇಂದು ಬೆಳಗ್ಗೆ ಮಠದಲ್ಲಿ ರಾಯರ ಬೃಂದಾವನದಲ್ಲಿ ಹೋಮ ಹವನ ವಿಶೇಷ ಪಂಚಾಮೃತ ಅಭಿಷೇಕ ಹಾಗೂ ಅಭಿಷೇಕ ಪೂಜೆ ಅಲಂಕಾರ ಪೂಜೆಯೊಂದಿಗೆ ರಾಯರ ಭಕ್ತಿಗೀತೆಗಳ ಸಂಗೀತ ಸುಧೆ ಯಶಸ್ವಿಯಾಗಿ ನೆರವೇರಿತು.
ಬೈರಾಪುರ ರಾಯರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಮಳೆ ಬೆಳೆ ಸಂವೃಧ್ದಿಗಾಗಿ ರಾಯರಲ್ಲಿ ವಿಶೇಷ ಪೂಜೆಯನ್ನು ಮಠದ ಸೇವಾ ಸಮತಿಯ ಅಧ್ಯಕ್ಷ ಟಿ.ಪುರುಷೋತ್ತಮರಾವ್ ಮತ್ತು ಕಾರ್ಯದರ್ಶಿ ಕೆ. ದೇವರಾಜ್ ಸೇರಿದಂತೆ ಅಪಾರ ಭಕ್ತರ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿದರು.