ಶಿವಮೊಗ್ಗ ; ಸ್ನೇಹಿತರಿಬ್ಬರ ನಡುವಿನ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ !

Written by Mahesha Hindlemane

Published on:

ಶಿವಮೊಗ್ಗ ; ವೈಯಕ್ತಿಕ ವಿಚಾರಕ್ಕೆ ಸ್ನೇಹಿತರಿಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ವಿರುಪಿನಕೊಪ್ಪ ಕ್ಯಾಂಪ್ ನಲ್ಲಿ ಮಂಗಳವಾರ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶಿವಮೊಗ್ಗ ತಾಲೂಕಿನ‌ ತ್ಯಾವರೆಕೊಪ್ಪದ ನಿವಾಸಿಯಾದ ದೇವರಾಜ್ (31) ಹತ್ಯೆಯಾದ ವ್ಯಕ್ತಿ. ವೆಂಕಟೇಶ್ ಸ್ನೇಹಿತನನ್ನು ಹತ್ಯೆಗೈದ ಆರೋಪಿ.

ದೇವರಾಜ್ ಮತ್ತು ವೆಂಕಟೇಶ್ ಇಬ್ಬರು ಸ್ನೇಹಿತರಾಗಿದ್ದು ವೈಯಕ್ತಿಕ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಸಿಟ್ಟಿಗೆದ್ದ ವೆಂಕಟೇಶ್ ಗುದ್ದಲಿಯಿಂದ ದೇವರಾಜ್ ತಲೆಗೆ ಹೊಡೆದಿದ್ದಾನೆ ಗಂಭೀರ ಗಾಯಗೊಂಡ ದೇವರಾಜ್ ಕುಸಿದುಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ವೆಂಕಟೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

Leave a Comment