ಹೊಸನಗರ

ಕುಂದು-ಕೊರತೆ ; ಆಧಾರ್ ಅಪ್ಡೇಟ್ ನಂತಹ ಮೂಲಭೂತ ಸೌಕರ್ಯ ಇಲ್ಲದ ಊರು ಹೊಸನಗರ !

ಹೊಸನಗರ : ಕಳೆದೊಂದು ವರ್ಷದಿಂದ ಹೊಸನಗರ ಅಂಚೆ ಕಚೇರಿಯಲ್ಲಿರುವ ಆಧಾರ್ ಕೇಂದ್ರದಲ್ಲಿ ಒಬ್ಬ ಉದ್ಯೋಗಿ ಇಲ್ಲದೆ, ಒಂದು ಅರ್ಜಿ ಫಾರಂ ಕೊಡುವವರು ಗತಿ ಇಲ್ಲದಾಗಿದೆ. ಪೋಸ್ಟ್ ಆಫೀಸ್ ನೌಕರರೊಬ್ಬರು, ಬೆಳಿಗ್ಗೆ 9.30ಕ್ಕೆ ಬನ್ನಿ, ಮೊದಲ 10 ಜನರಿಗೆ ಅರ್ಜಿ ಫಾರಂ ಕೊಡುತ್ತೇವೆ ಅನ್ನುತ್ತಾರೆ.

WhatsApp Group Join Now
Telegram Group Join Now
Instagram Group Join Now

ಹೊಸನಗರ ತಾಲ್ಲೂಕಿನ ದೂರದ ಅರಸಾಳು, ಪುರಪ್ಪೆಮನೆ, ಹುಂಚ, ಮಾಸ್ತಿಕಟ್ಟೆ, ಯಡೂರು, ನಿಟ್ಟೂರು, ನಗರದಂತಹ ಸ್ಥಳಗಳಿಂದ ಬರುವವರು ದಿನಾ ಬಂದು ಲಕ್ ಪ್ರಯೋಗಿಸುವುದಕ್ಕೆ ಸಾಧ್ಯವೇ?. ಪೋಸ್ಟ್ ಆಫೀಸ್ ನೌಕರರು ಅವರ ಕೆಲಸದ ಮಧ್ಯೆ ಬಿಡುವು ಮಾಡಿಕೊಳ್ಳಲಾಗದೆ ಹೀಗೆ ನಿಭಾಯಿಸುತ್ತಿದ್ದಾರೆ.

ಹೊಸನಗರ ತಾಲ್ಲೂಕು ವಿಧಾನಸಭಾ ಕ್ಷೇತ್ರ ಆಗಬೇಕೆಂದು ಹೋರಾಟ ನಡೆಸುವವರಿಗೆ, ಆಧಾರ್ ಅಪ್ಡೇಟ್ ನಂತಹ ಮೂಲಭೂತ ಸೌಕರ್ಯ ಇಲ್ಲದ ಊರು ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆಯಾಗುವ ಕನಸು ಕಾಣಬಹುದೇ ಎಂದು ಅನ್ನಿಸುತ್ತಿಲ್ಲವೇ?.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

✍️ಪ್ರತಿಭಾ, ಸೊನಲೆ ನಿವಾಸಿ

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]