ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಗೆ ತಲುಪಿದ ಬಾಳೂರು ಪ್ರಾಥಮಿಕ ಆರೋಗ್ಯ ಉಪಕೇಂದ್ರ !

Written by Mahesha Hindlemane

Published on:

ರಿಪ್ಪನ್‌ಪೇಟೆ ; ಬಾಳೂರು ಗ್ರಾಮದಲ್ಲಿ ನಿರ್ಮಿಸಲಾಗಿರುವ ಪ್ರಾಥಮಿಕ ಆರೋಗ್ಯ ಉಪಕೇಂದ್ರದ ಕಟ್ಟದ ನಿರ್ವಹಣೆಯಿಲ್ಲದೆ ಕಿಟಕಿ, ಬಾಗಿಲುಗಳು ಮುರಿದು ಉದುರಿ ಬೀಳುತ್ತಿವೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೌದು, ಪ್ರಾಥಮಿಕ ಆರೋಗ್ಯ ಉಪಕೇಂದ್ರ ಕಟ್ಟಡದ ಒಳಭಾಗದಲ್ಲಿನ ಒಳರೂಪ್ ಮರದ ಹಲಗೆಗಳು ಮತ್ತು ಹಿಂಬಾಗಿಲು ಮತ್ತು ನೀರಿನ ತೋಟಿ ಸಹ ಸಂಪೂರ್ಣವಾಗಿ ನಿರ್ವಹಣೆಯಿಲ್ಲದೆ ಉದುರಿ ಬೀಳುತ್ತಿವೆ. ಇನ್ನೂ ಈ ಪ್ರಾಥಮಿಕ ಉಪಕೇಂದ್ರ ವ್ಯಾಪ್ತಿಗೆ ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆವಟೂರು, ಕಾಳೇಶ್ವರ, ಹಾಲುಗುಡ್ಡೆ ಮಾದ್ಲಾರದಿಂಬ, ಬಾಳೂರು, ಕುಕ್ಕಳಲೆ, ನೇರಲುಮನೆ ಸೇರಿದಂತೆ ಮಜರೆ ಗ್ರಾಮಗಳ ಸುಮಾರು 8 ರಿಂದ 10 ಸಹಸ್ರ ಜನಸಂಖ್ಯೆ ಹೊಂದಿದ್ದು ಇಲ್ಲಿನ ಆರೋಗ್ಯ ಉಪಕೇಂದ್ರದಲ್ಲಿ ಸಮುದಾಯ ಆರೋಗ್ಯಾಧಿಕಾರಿ ಇಲ್ಲದೆ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಉಪಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಆರೋಗ್ಯಾಧಿಕಾರಿ ಹೇಳದ ಕೇಳದೆ ಹೋಗಿದ್ದು ಇದರಿಂದಾಗಿ ಆರೋಗ್ಯ ಕಾರ್ಯಕರ್ತೆಯೊಬ್ಬರೆ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದೆ. ಒಂದು ಕಡೆ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ನಿಯೋಜಿಸುತ್ತಾರೆ ಮತ್ತು ಸರ್ಕಾರ ಇಲಾಖೆಯ ಮಾಹಿತಿಯನ್ನು ಪ್ರತಿ ಹಳ್ಳಿ-ಹಳ್ಳಿ ಸುತ್ತಿ ಪಡೆದು ಮಾಹಿತಿ ನೀಡುವುದು ಈ ಎಲ್ಲಾ ಕೆಸಲವನ್ನು ಮಾಡಿ ಸಾರ್ವಜನಿಕರಿಂದಲೂ ದೂರು ಬಾರದಂತೆ ಕರ್ತವ್ಯವನ್ನು ನಿರ್ವಿಘ್ನದಿಂದ ನಿರ್ವಹಿಸಿದರೂ ಕೂಡಾ ಗ್ರಾಮಸ್ಥರು, ಸಾರ್ವಜನಿಕರಿಂದ ಆರೋಪ ಕೇಳಿ ಬಂದ ಕಾರಣ ತೀವ್ರ ಆಸಮದಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ.

Leave a Comment