ಹೊಸನಗರ

ಸೆ.7ರ ಪಾದಯಾತ್ರೆಗೆ ಬಿಜೆಪಿ-ಜೆಡಿಎಸ್ ನಾಯಕರಿಗೆ ಅವಕಾಶವಿಲ್ಲ ; ಕಿಮ್ಮನೆ ರತ್ನಾಕರ್

Former Education Minister Kimmane Ratnakar said that BJP and JDS leaders are not allowed to participate in the 7 km padayatra from Binthla village to Thirthahalli against the Kasturi Rangan report, an anti-farmer bill that the central government is fighting to implement.

InShot 20260904 131827975

ಹೊಸನಗರ : ಕೇಂದ್ರ ಸರ್ಕಾರ ಜಾರಿಗೆ ತರಲು ಹೋರಾಟಿರುವ ರೈತ ವಿರೋಧಿ ಮಸೂದೆಯಾದ ಕಸ್ತೂರಿ ರಂಗನ್ ವರದಿಯ ವಿರುದ್ಧ ಸುಮಾರು 7 ಕಿ.ಮೀ. ಬಿಂತ್ಲಾ ಗ್ರಾಮದಿಂದ ತೀರ್ಥಹಳ್ಳಿಯವರೆಗಿನ ಪಾದಯಾತ್ರೆಗೆ ಕೇಂದ್ರ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡುತ್ತಿರುವುದರಿಂದ ಬಿಜೆಪಿ, ಜೆಡಿಎಸ್ ನಾಯಕರುಗಳಿಗೆ ಅವಕಾಶವಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಗಾಂಧಿ ಮಂದಿರ (ಕಾಂಗ್ರೆಸ್ ಕಛೇರಿ)ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಪಾದಯಾತ್ರೆಯಲ್ಲಿ ಕೇಂದ್ರದ ಬಿಜೆಪಿ ಕೇಂದ್ರ ಸರ್ಕಾರವೇ ಅಧಿಸೂಚನೆಯನ್ನು ಹೊರಡಿಸಿರುವುದರಿಂದ ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಬೇಕಾದ ಅನಿವಾರ್ಯತೆ ಇರುವುದರಿಂದ ಹಾಗೂ ಮುಂದಿನ ದಿನದಲ್ಲಿ ಚುನಾವಣೆಗಳು ಸಾಲು-ಸಾಲು ಬರುತ್ತಿರುವುದರಿಂದ ಬಿಜೆಪಿಯವರು ಬಂದು ನಮ್ಮ ಜನರನ್ನು ದಾರಿ ತಪ್ಪಿಸುವುದರಿಂದ ಆ ಎರಡು ಪಕ್ಷದವರನ್ನು ಬಿಟ್ಟು ರೈತರು ಹಾಗೂ ಇತರೆ ಎಲ್ಲಪಕ್ಷದ ನಾಯಕರನ್ನು ಪಾದಯಾತ್ರೆಗೆ ಆಹ್ವಾನಿಸಲಾಗಿದೆ ಎಂದರು.

ಈ ಪಾದಯಾತ್ರೆ ಕಾಂಗ್ರೆಸ್ ಪಕ್ಷದ ವತಿಯಿಂದಲ್ಲೇ ಆರಂಭಿಸಲಾಗಿದ್ದು ಕಸ್ತೂರಿ ರಂಗನ್ ವರದಿ ಅನಿಷ್ಠಾನದಿಂದ ಮಲೆನಾಡಿನ ಜನತೆಗೆ ಆಗುವ ಅನ್ಯಾಯವನ್ನು ವಿರೋಧಿಸಿ ಈ ಪ್ರತಿಭಟನೆ ಹಾಗೂ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಕಾಡು ಪ್ರಾಣಿಗಳ ರಕ್ಷಣೆಗಾಗಿ ಮನುಷ್ಯರನ್ನು ಬಲಿಕೋಡುತ್ತಿರುವುದು ಯಾವ ನ್ಯಾಯ? ಪ್ರಾಣಿಗಳನ್ನು ರಕ್ಷಿಸಲು ಮನುಷ್ಯ ಪ್ರಾಣಿಯನ್ನು ಬಲಿ ಕೋಡುವ ಈ ವರದಿ ಜಾರಿ ಮಾಡುವುದು ಬೇಡ ಎಂದು ವರದಿ ಜಾರಿಯಾದರೇ ಅರಣ್ಯ ದಂಚಿನ ಜನರನ್ನು ಒಕ್ಕಲೆಬ್ಬಿಸಿ ಎಲ್ಲಿಗೆ ಕಳುಹಿಸುತ್ತಾರೆ ಎಂದು ಸರ್ಕಾರ ಸ್ವಷ್ಟ ಪಡಿಸಬೇಕು ಜೊತೆಗೆ ಕಸ್ತೂರಿ ರಂಗನ್ ಅವರು ಮೂಲತ ಶಿಕ್ಷಣ ತಜ್ಞರು ಅವರು ಪರಿಸರ ತಜ್ಞರಲ್ಲ ಎಂಬುದನ್ನು ಆರಿತುಕೊಳ್ಳಬೇಕು ಎಂದರು.

ಜನಸಂಖ್ಯೆ ಹೆಚ್ಚಳ:

1900ರ ಇಸವಿಯಲ್ಲಿ ಭಾರತದ ಜನಸಂಖ್ಯೆ ಸುಮಾರು ಅಂದಾಜು 20 ಕೋಟಿ ಇತ್ತು ಆದರೆ ಈಗ ಭಾರತ ದೇಶದ ಜನಸಂಖ್ಯೆ 140 ಕೋಟಿ ದಾಟಿದೆ. ಇಷ್ಟು ದೊಡ್ಡ ಜನಸಮೂಹಕ್ಕೆ ವಸತಿ ಉದ್ಯೋಗ ಅಗತ್ಯವಿದೆ. ಕೇವಲ ಗಾಳಿ-ನೀರಿನಲ್ಲಿ ಬದುಕಲು ಸಾಧ್ಯವಿಲ್ಲ. ಕಸ್ತೂರಿ ರಂಗನ್ ವರದಿ ಜಾರಿ ಮಾಡುವುದಕ್ಕಿಂತ ಮುಂಚೆ ಭಾರತ ದೇಶ ಜನರಿಗೆ ವಸತಿ ಹಾಗೂ ಉದ್ಯೋಗ ಕಲ್ಪಿಸಿ ಎಂದರು.

2013ರಲ್ಲಿ ಪ್ರಥಮ ಕರಡು ಬಂದಾಗ ಅಲ್ಲಿಂದ ಇಲ್ಲಿಯವರೆಗೆ ನಾವು ವಿರೋಧಿಸುತ್ತಾ ಬಂದಿದ್ದರೂ ಈಗ ಮತ್ತೆ ಕರಡು ಅಧಿಸೂಚನೆ ಹೊರಡಿಸಲಾಗಿದೆ ಮುಂಬರುವ ಮೂರು ದಿನಗಳ ಅಧಿವೇಶನದಲ್ಲಿ ಕನಿಷ್ಠ ಒಂದು ದಿನ ಈ ಬಗ್ಗೆ ಚರ್ಚಿಸಿ ಕೂಡಲೆ ವರದಿಯನ್ನು ಹಿಂಪಡೆಯಲಿ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಪಾದಯಾತ್ರೆ:

ಸೆಪ್ಟಂಬರ್ 7ನೇ ಸೋಮವಾರ ಕಸ್ತೂರಿ ರಂಗನ್ ವರದಿಯಡಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸುವ ತೀರ್ಥಹಳ್ಳಿಯ ಬಿಂತ್ಲಾ ಗ್ರಾಮದಿಂದ ತೀರ್ಥಹಳ್ಳಿಯವರೆಗೆ ಸೂಮಾರು 7. ಕಿ.ಮೀ. ನಡೆಯಲಿದೆ. ಇದರ ಚಾಲನೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಹಾಗೂ ಪ್ರಚಾರ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಗಡೆಯವರು ಚಾಲನೆ ನೀಡಲಿದ್ದಾರೆ. ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಬಳಿ ಸಾರ್ವಜನಿಕರ ಸಭೆಯಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಸಭೆಯನ್ನು ಉದ್ಘಾಟಿಸಲಿದ್ದಾರೆ ಎಂದರು.

ಈ ಪಾದಯಾತ್ರೆಗೆ ಮಲೆನಾಡಿನ ಎಲ್ಲ ಜನರು ಆಗಮಿಸಿ ಯಶಸ್ವಿಗೊಳಿಸಿಕೊಡುವುದರ ಜೊತೆಗೆ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಕೈ ಜೋಡಿಸಿ ಎಂದರು.

ಈ ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿಗೌಡ, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಎಂ.ಪಿ ಸುರೇಶ್, ಪ್ರಭಾಕರ್, ಅಶ್ವಿನಿಕುಮಾರ್, ಜಯನಗರ ಗುರು, ಗುರುರಾಜ್ ಸುಣಕಲ್ಲು, ಧರ್ಮರಾವ್, ಶುಭಾಕರ, ವಕೀಲ ಮೋಹನ್ ಶೆಟ್ಟಿ, ಇಕ್ಬಾಲ್ ಉಬೇದುಲ್ಲ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]