HOSANAGARA ; ಇಲ್ಲಿನ ಬಸ್ ನಿಲ್ದಾಣ ಎದುರಿನಲ್ಲಿರುವ ಚಾಮುಂಡೇಶ್ವರಿ ಕಾಫಿವರ್ಕ್ಸ್ ಮಾಲೀಕರಾದ ಕೆ.ಎಂ. ನಟರಾಜ್ (78) ರವರು ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ.
ಇವರು ಪಟ್ಟಣ ಪಂಚಾಯತಿ ಸದಸ್ಯರಾಗಿ ಜನಹಿತ ಕೆಲಸವನ್ನು ಮಾಡುವುದರ ಜೊತೆಗೆ ಹೊಸನಗರದ ತಾಲ್ಲೂಕು ಆರ್ಯವೈಶ್ಯ ಸಂಘದ ಅಧ್ಯಕ್ಷ ಸದಸ್ಯರಾಗಿ ಪಾರ್ವತಿ-ಈಶ್ವರ ಗಣಪತಿ ದೇವಸ್ಥಾನಕ್ಕೆ, ಶ್ರೀ ದುರ್ಗಾಂಬ ದೇವಸ್ಥಾನಕ್ಕೆ, ರಾಘವೇಂದ್ರ ಸ್ವಾಮಿ ಬೃಂದಾವನಕ್ಕೆ ಸಾಕಷ್ಟು ದೇಣಿಗೆ ನೀಡಿದ್ದು ಹೊಸನಗರದಲ್ಲಿರುವ ಎಲ್ಲ ಸಂಘ-ಸಂಸ್ಥೆಗಳಿಗೆ ಖಾಯಂ ಸದಸ್ಯರಾಗಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ.
ಇವರು ಪತ್ನಿ ಓರ್ವ ಪುತ್ರ, ಪುತ್ರಿ ಹಾಗೂ ಮೊಮ್ಮಕ್ಕಳನ್ನು, ಅಪಾರ ಬಂಧು – ಬಳಗದವರನ್ನು ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.
ಸಂತಾಪ:
ಇವರ ನಿಧನಕ್ಕೆ ಆರ್ಯವೈಶ್ಯ ಸಂಘದ ಕನಕರಾಜ್, ವಿನಾಯಕ, ರಾಮಕೃಷ್ಣಮೂರ್ತಿ ಸದಾಶಿವ ಶ್ರೇಷ್ಠಿ, ಗಾಯಿತ್ರಿ ನಾಗರಾಜ್, ಕಲಗೋಡು ರತ್ನಾಕರ್, ದತ್ತಾತ್ರೇಯ ಉಡುಪ, ಎನ್ ಶ್ರೀಧರ ಉಡುಪ, ರಾಜಮೂರ್ತಿ, ಶ್ರೀನಿವಾಸ್ ಕಾಮತ್, ಸುದೇಶ್ಕಾಮತ್, ಸಂತೋಷ್ಕಾಮತ್ ಎನ್.ಆರ್ ದೇವಾನಂದ್, ಕೆ.ಎಸ್. ಗುರುರಾಜ್, ಬಿ.ಎಸ್. ಸುರೇಶ್, ಮಾರ್ಷಲ್ ಷಾರಂ, ಸುರೇಶ್ ಕುಮಾರ್ ಇನ್ನೂ ಮುಂತಾದವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.