ಗಣರಾಜ್ಯೋತ್ಸವ ಪಥ ಸಂಚಲನಕ್ಕೆ 3ನೇ ಬಾರಿಗೆ ಕಚ್ಚಿಗೆಬೈಲು ಗ್ರಾಮದ ಯೋಧೆ ಕು|| ಚಾಂದಿನಿ ಆಯ್ಕೆ

Written by Mahesha Hindlemane

Published on:

ಹೊಸನಗರ ; ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಚ್ಚಿಗೆಬೈಲು ಗ್ರಾಮದ ವಾಸಿ ಧರ್ಮಪ್ಪ ಮತ್ತು ವೇದಾವತಿ ದಂಪತಿಗಳ ಪುತ್ರಿ ಕು|| ಚಾಂದಿನಿ, ಈ ಬಾರಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪ್ರಯುಕ್ತ ನಡೆಯುವ ಕರ್ತವ್ಯ ಪಥದ ಪೆರೇಡ್ ನಲ್ಲಿ ಭಾರತೀಯ‌ ಸೈನ್ಯವನ್ನು ಪ್ರತಿನಿಧಿಸಿ ಹೆಜ್ಜೆ ಹಾಕಲಿದ್ದಾಳೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮಗಳು ಭಾರತೀಯ ಸೈನ್ಯ ಸೇರಬೇಕೆಂಬ ತನ್ನ ತಂದೆಯ ಕನಸನ್ನು ನನಸಾಗಿಸಿದ ಚಾಂದಿನಿ, ಪ್ರಸ್ತುತ ಸಿ.ಆರ್.ಪಿ.ಎಫ್ ಯೋಧೆಯಾಗಿ ಸೇವೆ ಸಲ್ಲಿಸುತ್ತಿರುವುದು ವಿಶೇಷ.

ಪ್ರಾಥಮಿಕದಿಂದ ಪದವಿ ಶಿಕ್ಷಣದವರೆಗೂ ಸರ್ಕಾರಿ ಶಾಲೆಯಲ್ಲೇ ಅಭ್ಯಾಸ ಮಾಡಿದ್ದ ಈಕೆ, ಇದುವರೆಗೆ ಒಟ್ಟು 3 ಬಾರಿ ಕರ್ತವ್ಯ ಪಥದ ಪೆರೇಡ್ ಗೆ ಆಯ್ಕೆಯಾಗಿದ್ದು, ತಾಲೂಕಿಗೆ ಕೀರ್ತಿ ತಂದಿದ್ದಾಳೆ. ಜನವರಿ 26 ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಪರೇಡ್ ನಲ್ಲಿ ಹೆಜ್ಜೆ ಹಾಕಲಿದ್ದಾಳೆ.

Leave a Comment