ಖಾಕಿ ಕವಿ ಮಂಜುನಾಥ್‌ರಿಗೆ ಮುಖ್ಯಮಂತ್ರಿ ಚಿನ್ನದ ಪದಕ

Written by Mahesha Hindlemane

Published on:

ಹೊಸನಗರ ; ಪೊಲೀಸ್ ಇಲಾಖೆಯಲ್ಲಿ 23 ವರ್ಷಗಳ ಅವಿರತ ಸೇವೆಯ ಜೊತೆಯಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿ ಸುಮಾರು ಹತ್ತು ಸಾಹಿತ್ಯ ಕೃತಿಗಳನ್ನು (ಕತೆ-ಕವನ) ಲೋಕಾರ್ಪಣೆ ಮಾಡಿದ ರಾಜ್ಯ ಪೊಲೀಸ್ ಇಲಾಖೆಯ ಮೊದಲ ವ್ಯಕ್ತಿ ಎಂಬ ವಿಶಿಷ್ಟ ಗೌರವಕ್ಕೆ ಪಾತ್ರರಾಗುವ ಮೂಲಕ 2024-25ನೇ‌ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಪ್ರಶಸ್ತಿಗೆ ಭಾಜನರಾಗಿರುವ ಹೊಸನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಖಾಕಿ ಕವಿ ಎಂದೇ ಖ್ಯಾತರಾದ ಮಂಜುನಾಥ್ ಅವರಿಗೆ ಇಲ್ಲಿನ ವೃತ್ತ ನಿರೀಕ್ಷಕ ಗುರಣ್ಣ ಎಸ್ ಹೆಬ್ಬಾಳ್, ಪಿಎಸ್ಐ ಶಂಕರಗೌಡ ಪಾಟೀಲ್ ಸೇರಿದಂತೆ ಸಿಬ್ಬಂದಿ ವರ್ಗ ಅಭಿನಂದಿಸಿದೆ.

WhatsApp Group Join Now
Telegram Group Join Now
Instagram Group Join Now

Leave a Comment