ಕುಮಾರಸ್ವಾಮಿಯನ್ನೇ ಸಿಎಂ ಮಾಡುತ್ತೇವೆಂದು ಯಾರ್ಯಾರು ಬಂದು ಕಾಲು ಹಿಡಿಯುತ್ತಾರೋ ಗೊತ್ತಿಲ್ಲ, ಕಾಲು ಹಿಡಿಯೋದಂತೂ ಗ್ಯಾರಂಟಿ ; ಎಸ್.ಎಲ್ ಭೋಜೇಗೌಡ

ಚಿಕ್ಕಮಗಳೂರು: ಸೂರ್ಯ-ಚಂದ್ರ ಹುಟ್ಟುವುದು ಎಷ್ಟು ಸತ್ಯವೋ, ಕುಮಾರಸ್ವಾಮಿ ಸಿಎಂ ಆಗುವುದು ಅಷ್ಟೇ ಸತ್ಯ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯನ್ನೇ ಸಿಎಂ ಮಾಡುತ್ತೇವೆಂದು ಯಾರ್ಯಾರು ಬಂದು ಕಾಲು ಹಿಡಿಯುತ್ತಾರೋ ಗೊತ್ತಿಲ್ಲ. ಕಾಲು ಹಿಡಿಯೋದಂತೂ ಗ್ಯಾರಂಟಿ, ದೇವೇಗೌಡರ ಕಾಲಿಡಿಯುತ್ತಾರೆ. ಕುಮಾರಸ್ವಾಮಿಯ ಒಂದು ಇಂಟರ್ ವ್ಯೂ ಕೊಡಿಸಿಯೆಂದು ದೇವೇಗೌಡರ ಕಾಲು ಹಿಡಿಯುತ್ತಾರೆ ಎಂದರು.

ಈ ರಾಜ್ಯದಲ್ಲಿ ಯಡಿಯೂರಪ್ಪ ಇಲ್ಲದಿದ್ದರೆ ಬಿಜೆಪಿ ಬಿಗ್ ಜೀರೋ. ಬಿಜೆಪಿಯಲ್ಲಿ ನೂರು ಜನ ಲೀಡರ್ ಇರಬಹುದು, ಆದರೆ ಬಿಜೆಪಿ ನಿಂತಿರುವುದು ಬಿ.ಎಸ್. ಯಡಿಯೂರಪ್ಪ ಮೇಲೆ. ಸಮ್ಮಿಶ್ರ ಸರ್ಕಾರ ಮಾಡದಿದ್ದರೆ ಬಿ.ಎಸ್.ವೈ ಬಿಜೆಪಿಯಲ್ಲಿ ಇಷ್ಟು ಪ್ರಭಾವಿ ಆಗುತ್ತಿರಲಿಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಗಿಲು ತೆಗಿಯಲು ಅಂದಿನ ಸಮ್ಮಿಶ್ರ ಸರ್ಕಾರವೇ ಕಾರಣ. ಆದರೆ, ಇಂದು ಅದೇ ಪಕ್ಷದವರು ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಗಿಲು ತೆಗೆದವರನ್ನು ಮನೆಗೆ ಕಳಿಸಿದ್ದಾರೆ ಎಂದರು.

ಹಾಸನದಲ್ಲಿ ಪಕ್ಷ ಬಿಡುತ್ತೇವೆಂದು ಹೇಳಿದವರದ್ದು ಎರಡು ವರ್ಷದ ಧಾರಾವಾಹಿ. ಅರಸೀಕೆರೆ, ಅರಕಲಗೂಡಿಗೆ ಅಭ್ಯರ್ಥಿಗಳಿದ್ದಾರೆ, ಜೆಡಿಎಸ್ ಬಿಟ್ಟು ನೂರಾರು ಜನ ಬಿಟ್ಟು ಹೋಗಿದ್ದಾರೆ, ಆದರೂ 37 ಸೀಟು ಗೆದ್ದಿಲ್ವಾ ಎಂದು ಎಸ್.ಎಲ್.ಭೋಜೇಗೌಡ ಹೇಳಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,745FollowersFollow
0SubscribersSubscribe
- Advertisement -spot_img

Latest Articles

error: Content is protected !!