ಹೊಸನಗರ ; ಇತ್ತಿಚಿಗೆ ಶಿವಮೊಗ್ಗದ ಬೆಕ್ಕಿನಕಲ್ಮಠದಲ್ಲಿ ನಡೆದ ವಚನ ಪ್ರತಿಭೋತ್ಸವದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಹೊಸನಗರದ ಕುವೆಂಪು ವಸತಿ ವಿದ್ಯಾಶಾಲೆಯ 8ನೇ ತರಗತಿ ವಿದ್ಯಾರ್ಥಿ ದೇಶಿಕ್ ಚರಣ್ ವಚನ ಗಾಯನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಭಿನಂದನೆ ;
ಹೊಸನಗರ ತಾಲ್ಲೂಕಿಗೆ ಕೀರ್ತಿ ತಂದಿರುವ ದೇಶಿಕ್ ಚರಣ್ರಿಗೆ ಕುವೆಂಪು ವಿದ್ಯಾಶಾಲೆಯ ಮುಖ್ಯೋಪಾಧ್ಯಾಯರು ಹಾಗು ಸಿಬ್ಬಂದಿಗಳು ಹಾಗು ಆಡಳಿತ ಮಂಡಳಿ ಶುಭ ಹಾರೈಸಿ ಅಭಿನಂದಿಸಿದ್ದಾರೆ.

