HOSANAGARA ; ರಿಪನ್ಪೇಟೆ ಮೆಸ್ಕಾಂ ಇಲಾಖೆಯ ವಿದ್ಯುತ್ ಗುತ್ತಿಗೆದಾರ ನಾಗರಾಜ ಕೆ.ಹೆಚ್, ದುಂಡಾರ್ತನೆ ಹಾಗೂ ಇಲಾಖೆಗೆ ನಷ್ಟಪಡಿಸಿರುವುದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಚಿಕ್ಕಜೇನಿ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ಶಶಿಕುಮಾರ್ ಹೊಸನಗರದ ಮೆಸ್ಕಾಂ ಇಲಾಖೆಗೆ ದೂರು ಸಲ್ಲಿಸಿ ತನಿಖೆಗೆ ಒತ್ತಾಯಿಸಿದ್ದಾರೆ.
ದೂರಿನಲ್ಲಿ ಚಿಕ್ಕಜೇನಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಜೇನಿ ಗ್ರಾಮದ ಸರ್ವೆ ನಂ. 31 ರಲ್ಲಿ ಜ.01 ರಂದು ವಿದ್ಯುತ್ ಮಾರ್ಗದ ಮೇಲೆ ಒಣಗಿದ ಮರದ ರೆಂಬೆಯು ಗಾಳಿಗೆ ಮುರಿದು ಬಿದ್ದು 1 ಪಿಎಸ್ಇ ವಿದ್ಯುತ್ ಕಂಬ ಮುರಿದು ಹೋಗಿರುತ್ತದೆ. ಇದನ್ನು ನಾನು ಮೆಸ್ಕಾಂ ಇಲಾಖೆ ರಿಪ್ಪನ್ಪೇಟೆ ಸೆಕ್ಷನ್ ಸಹಾಯಕ ಇಂಜಿನಿಯರ್ ಆದ ಅಶ್ವಲ್ರ ಗಮನಕ್ಕೆ ತಂದಿರುತ್ತೇವೆ. ನಂತರ ಜ. 03 ರಂದು 2 ವಿದ್ಯುತ್ ಕಂಬಗಳನ್ನು ಕೆ.ಎ-15ಎ-6253 ಸಂಖ್ಯೆಯ ವಾಹನದಲ್ಲಿ ತೆಗೆದುಕೊಂಡು ವಿದ್ಯುತ್ ಕಂಬ ಮುರಿದ ಸ್ಥಳಕ್ಕೆ ಬಂದಿರುವುದನ್ನು ಗಮನಿಸಿ ಪುನಃ ಅಂದೇ ರಿಪ್ಪನ್ಪೇಟೆ ಸಹಾಯಕ ಇಂಜಿನಿಯರ್ ಗಮನಕ್ಕೆ ತಂದು, ನೀವು ಸ್ಥಳ ಮಹಜರು ಮಾಡಿದ್ದೀರಾ? ಎಂದು ಪ್ರಶ್ನಿಸಿ, ಅದಕ್ಕೆ ಸಂಬಂಧಿಸಿದಂತೆ ಯೋಜನಾ ವರದಿಯನ್ನು ಸಿದ್ಧಪಡಿಸಿದ್ದೀರಾ? ಎಂದು ನಾನು ಪ್ರಶ್ನಿಸಿದಾಗ, ಅದಕ್ಕೆಲ್ಲ ನಾವು ಘಟನೆ ನಡೆದ ಸ್ಥಳಕ್ಕೆ ಬರುವ ಅವಶ್ಯಕತೆ ಇಲ್ಲ, 2 ಕಂಬ ಮುರಿದ ಫೋಟೋ ಕಳಿಸಿರುತ್ತಾರೆ, ಅದನ್ನು ನೋಡಿ ನಾವು 2 ಕಂಬ ಕಳಿಸಿರುತ್ತೇವೆ ಎಂಬ ಹಾರಿಕೆ ಉತ್ತರವನ್ನು ನೀಡಿರುತ್ತಾರೆ. 1 ಕಂಬ ಮಾತ್ರ ಮುರಿದಿದೆ ಎಂದು ನಾವು ಹೇಳಿ ಮನವರಿಕೆ ಮಾಡಿದರೂ ಸಹ ಸಹಾಯಕ ಇಂಜಿನಿಯರ್ರವರು ಸ್ಪಂದಿಸದೆ ಗುತ್ತಿಗೆದಾರರ ಪರವಾಗಿ ನಿಂತಿರುತ್ತಾರೆ.

ನಂತರ ಗುತ್ತಿಗೆದಾರನು ದುರಸ್ತಿಯಾಗಿದ್ದ 1 ಕಂಬದ ಜೊತೆಗೆ ಸುಸ್ಥಿತಿಯಲ್ಲಿದ್ದ ಇನ್ನೊಂದು ಕಂಬವನ್ನು ಸಹ ತನ್ನ ಕೆಲಸಗಾರರೊಂದಿಗೆ ಫೋನ್ ಮೂಲಕ ಮಾತನಾಡಿ, ಸುಸ್ಥಿತಿಯಲ್ಲಿದ್ದ ಇನ್ನೊಂದು ಕಂಬವನ್ನು ಕೀಳಲು ಬಂದರೆ ಕಿತ್ತು ತೆಗೆಯಿರಿ ಇಲ್ಲದಿದ್ದರೆ ಗುದ್ದಿ ಮುರಿದು ಹಾಕು ಎಂದು ತನ್ನ ಮೊಬೈಲ್ ಮೂಲಕ ತನ್ನ ಕೆಲಸಗಾರರಿಗೆ ಸೂಚನೆ ನೀಡಿರುತ್ತಾನೆ. ನಂತರ ತೋಟದಲ್ಲಿ ಹಾದುಹೋಗಿರುವಂತ ವಿದ್ಯುತ್ ತಂತಿಗಳಿಗೆ ಡ್ರಿಪ್ ಪೈಪನ್ನು ಅಳವಡಿಸಿಕೊಳ್ಳಲು ರೈತರಿಂದ ಹಣದ ಬೇಡಿಕೆ ಇಟ್ಟಿದ್ದಾನೆ. ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಿರ್ವಹಿಸಿ ಸರಿ ಇರುವ ಹಳೆ ಕಂಬವನ್ನು ತೆರವುಗೊಳಿಸಿ, ಅದನ್ನು ತನ್ನ ವಾಹನದಲ್ಲಿ ತೆಗೆದುಕೊಂಡು ಹೋಗುವ ಪ್ರಯತ್ನದಲ್ಲಿದ್ದಾಗ ಗ್ರಾಮಸ್ಥರು ಅದನ್ನು ನೋಡಿ ವಿರೋಧ ವ್ಯಕ್ತಪಡಿಸಿದಾಗ, ಸ್ವತಃ ಗುತ್ತಿಗೆದಾರನಾದ ನಾಗರಾಜ ಕೆ.ಹೆಚ್ ರೈತರು ಹಾಗೂ ಗ್ರಾಮಸ್ಥರ ಮೇಲೆ ದರ್ಪ ಮೆರೆದಿರುತ್ತಾರೆ.

ನಂತರ ಆ ಸ್ಥಳೀಯರ ಒತ್ತಡ ಹೆಚ್ಚಾದ ನಂತರ ತನ್ನ ವಾಹನದ ಮೇಲೆ ತೆಗೆದುಕೊಂಡು ಹೊರಟ್ಟಿದ್ದಂತಹ ಸುಸ್ಥಿತಿಯಲ್ಲಿ ಪಿಎಸ್ಇ ವಿದ್ಯುತ್ ಕಂಬವನ್ನು ಕೆಳಗೆ ಇಳಿಸುವ ಸಂದರ್ಭದಲ್ಲಿ ಸೈಜ್ ಕಲ್ಲನ್ನು ಇಟ್ಟು, ಹಾರೆಕೋಲಿನಿಂದ ಕಂಬವನ್ನು ಸ್ವತಃ ನಿಂತು ತನ್ನ ಕೆಲಸಗಾರರ ಮೂಲಕ ಮುರಿದುಹಾಕಿಸಿರುತ್ತಾನೆ. ಇದಕ್ಕೆ ಸಂಬಂಧಪಟ್ಟಂತಹ ಸಂಪೂರ್ಣ ಆಡಿಯೋ, ವಿಡಿಯೋಗಳು ನನ್ನ ಬಳಿ ಇವೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/15vGZo49BF
ಈ ರೀತಿಯಾಗಿ ಕಾನೂನುಬಾಹಿರವಾಗಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಇಲಾಖೆಗೆ ನಷ್ಟಪಡಿಸಿರುವುದಲ್ಲದೆ ಗ್ರಾಮಸ್ಥರು ಮತ್ತು ರೈತರ ಮೇಲೆ ದುಂಡಾವರ್ತನೆ, ಗೂಂಡಾಗಿರಿ ವರ್ತನೆ ತೋರಿಸಿರುವ ನಾಗರಾಜ ಕೆ.ಹೆಚ್ ಈತನ ಮೇಲೆ ಇಲಾಖೆಯು ಗಂಭೀರವಾದ ಕ್ರಮವನ್ನು ತೆಗೆದುಕೊಂಡು ಈತನನ್ನು ಗುತ್ತಿಗೆದಾರರ ಪಟ್ಟಿಯಿಂದ ತೆಗೆದು ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕೆಂದು ಹಾಗೂ ಇಲಾಖೆಗೆ ಮಾಡಿರುವ ನಷ್ಟವನ್ನು ಈತನಿಂದ ಸಂಪೂರ್ಣವಾಗಿ ಭರಿಸಿಕೊಳ್ಳಬೇಕೆಂದು ಮತ್ತು ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
Author Profile

- ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.
Latest entries
RipponpeteJune 2, 2025ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀಗಳು ಶಿವಮೊಗ್ಗ ಬೆಕ್ಕಿನಕಲ್ಮಠಕ್ಕೆ ಭೇಟಿ
RipponpeteJune 1, 2025ಶ್ರುತಪಂಚಮಿ ಆಚರಣೆ | ಜೈನಧರ್ಮ ಸಿದ್ಧಾಂತಗಳು ಜೀವನ ಮೌಲ್ಯಗಳನ್ನು ವರ್ಧಿಸುತ್ತದೆ ; ಹೊಂಬುಜ ಶ್ರೀಗಳು
HosanagaraJune 1, 2025ಹೊಸನಗರ ; ಜೂ. 2 ಮತ್ತು 3ಕ್ಕೆ ತಾಲೂಕಿನಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ 2025 ಕಾರ್ಯಕ್ರಮ
Adike RateJune 1, 2025Arecanut, Black Pepper Price 31 May 2025 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?