ರಿಪ್ಪನ್ಪೇಟೆ ; ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊಸನಗರ-ರಿಪ್ಪನ್ಪೇಟೆ ಮಾರ್ಗದ ಕೋಡೂರು ಗ್ರಾ.ಪಂ. ವ್ಯಾಪ್ತಿಯ ಶಾಂತಪುರ ಗ್ರಾಮದಲ್ಲಿ ನಡೆದಿದೆ.
ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ರಾಜು ಎಂಬಾತನ ಸ್ಥಿತಿ ಗಂಭೀರವಾಗಿದ್ದು ಇದೇ ಬೈಕಿನಲ್ಲಿದ್ದ ಶ್ರೀನಿವಾಸ್ ಎಂಬಾತನ ಕಾಲು ಮುರಿತವಾಗಿದೆ. ಇವರು ಮರಗೆಲಸಕ್ಕೆಂದು ಬಂದು ಕಳೆದ ಕೆಲ ದಿನಗಳಿಂದ ಶಾಂತಪುರದಲ್ಲಿ ನೆಲೆಸಿದ್ದರು ಎಂದು ತಿಳಿದುಬಂದಿದೆ.

ಇನ್ನೊಂದು ಬೈಕಿನಲ್ಲಿ ರಿಪ್ಪನ್ಪೇಟೆ ಕಡೆಯಿಂದ ಕೋಡೂರಿಗೆ ತೆರಳುತ್ತಿದ್ದ ಸಿದ್ದಗಿರಿ ಗ್ರಾಮದ ಇಬ್ಬರು ಯುವಕರಿಗೂ ಗಂಭೀರ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.
ಗಾಯಾಳುಗಳಿಗೆ ರಿಪ್ಪನ್ಪೇಟೆ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ರಿಪ್ಪನ್ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.