HOSANAGARA | ಪಟ್ಟಣಕ್ಕೆ ಹೊಂದಿಕೊಂಡಂತಿರುವ ಮಾವಿನಕೊಪ್ಪ ಸರ್ವೆ ನಂಬರ್ 16ರಲ್ಲಿ ರತ್ನಾಕರ ಬಿನ್ ಹಿರಿಯಣ್ಣನವರ ಅಡಿಕೆ, ಬಾಳೆತೋಟ ಮತ್ತು ಭತ್ತದ ಗದ್ದೆಯ ಮೇಲೆ ಧರೆ ಕುಸಿತವಾಗಿದ್ದು ಕಸಬಾ ಗ್ರಾಮ ಆಡಳಿತಾಧಿಕಾರಿ ಕೌಶಿಕ್ ಹಾಗೂ ರೆವಿನ್ಯೂ ಇನ್ಸ್ಪೆಕ್ಟರ್ ರೇಣುಕಯ್ಯನವರು ಸ್ಥಳ ತನಿಖೆ ಕಾರ್ಯ ಕೈಗೊಂಡಿದ್ದಾರೆ.

ಪಟ್ಟಣ ಪಂಚಾಯತಿಯ 10ನೇ ವಾರ್ಡ್ನ ಚರಂಡಿಯ ನೀರು, ಎಪಿಎಂಸಿ ಯಾರ್ಡ್ ನೀರು, ಇಂಡಸ್ಟ್ರಿಯಲ್ ಸಮೀಪದ ನೀರು, ಮಾವಿನಕೊಪ್ಪದ ಕೋಡಿ ನೀರು ಹಾಗೂ ಮಾವಿನಕೊಪ್ಪ ಕೆರೆಯ ನೀರು (ಕೆರೆ ದಂಡೆ ಸರಿಯಿಲ್ಲ) ಒಟ್ಟು ಸೇರಿ ಇವರ ಗದ್ದೆ, ತೋಟದ ಮಧ್ಯೆ ಹಾದು ಹೋಗುತ್ತಿರುವುದರಿಂದ ತೋಟದ ಧರೆ ಕುಸಿದಿದೆ ಎಂದು ಹೇಳಲಾಗಿದ್ದು ಮುಂದಿನ ದಿನದಲ್ಲಿ ಈ ನೀರು ಬೇರೆ ಮಾರ್ಗವಾಗಿ ಹೊಳೆಗೆ ತಲುಪಿಸದಿದ್ದರೆ ಹೋರಾಟ ಅನಿವಾರ್ಯ ಎಂದು ತೋಟದ ಮಾಲೀಕ ರತ್ನಾಕರ್ ತಿಳಿಸಿದ್ದಾರೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.