ಜೈನಾಚಾರದ ಅನುಷ್ಠಾನಗಳ ಪ್ರತಿಪಾದಕಚಾರಿತ್ರ್ಯ ಚಕ್ರವರ್ತಿ ಆಚಾರ್ಯ ಶ್ರೀ ಶಾಂತಿಸಾಗರ ಮುನಿಶ್ರೀ ; ಹೊಂಬುಜ ಶ್ರೀಗಳು

Written by Mahesha Hindlemane

Published on:

ರಿಪ್ಪನ್‌ಪೇಟೆ ; ‘ಜೈನ ಧರ್ಮದ ಮೂಲ, ಸಿದ್ದಾಂತಗಳ ಅನುಷ್ಠಾನಗಳ ಪ್ರತಿಪಾದಕರಾಗಿ ಚಾರಿತ್ರ್ಯ ಚಕ್ರವರ್ತಿ ಆಚಾರ್ಯ ಶ್ರೀ ಶಾಂತಿಸಾಗರ ಮುನಿಶ್ರೀಯವರಾಗಿದ್ದರು. ಧರ್ಮ ಪ್ರಸಾರದ ಅಗ್ರಪಂಕ್ತಿಯಲ್ಲಿನ ದಿಗಂಬರ ಮುನಿಚರ್ಯೆಯ ಐತಿಹ್ಯದ ಕುರಿತ ಅವರ ಪ್ರತಿಪಾದನೆಯು ಅನುಕರಣೀಯವಾದುದು’ ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶ್ರೀಕ್ಷೇತ್ರದಲ್ಲಿ ಸೋಮವಾರದಂದು ಆಚಾರ್ಯ ಮುನಿಶ್ರೀ ಶಾಂತಿಸಾಗರ ಮಹಾರಾಜರ ಪದಾರೋಹಣದ ಶತಮಾನೋತ್ಸವ ಸಂಸ್ಮರಣ ಕಾರ್ಯಕ್ರಮದಲ್ಲಿ, ‘ಜೈನಾಚಾರವು ವಿಶ್ವದ ಸರ್ವ ಸಂಕಷ್ಟಗಳಿಗೆ ಪರಿಹಾರ ನೀಡುವ ಸೂತ್ರವನ್ನು ಪ್ರತಿಪಾದಿಸುತ್ತದೆ’ ಎಂದು ಶ್ರೀಗಳವರು ವಿವರಿಸಿ, ಸ್ಮರಿಸಿ, ವಿನಯಾಂಜಲಿ ಅರ್ಪಿಸಿದರು.

ಆಚಾರ್ಯ ಮುನಿಶ್ರೀ ಶಾಂತಿಸಾಗರ ಮಹಾರಾಜರ ಭಾವಚಿತ್ರಕ್ಕೆ ಶ್ರೀಗಳವರು, ಭಕ್ತರು, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದರು.

Leave a Comment