ಹೊಸನಗರ ; ಪಟ್ಟಣದಲ್ಲಿ ಸುಮಾರು 60 ವರ್ಷಗಳ ಕಾಲ ಬಸ್ ನಿಲ್ದಾಣದಲ್ಲಿ ಅಂಗಡಿ ನಡೆಸಿ ಬಸ್ ಸ್ಟ್ಯಾಂಡ್ ಅಂಗಡಿ ಗಣಪತಿಯೆಂದು ಚಿರಪರಿಚಿತರಾದ ಗಣಪತಿ ಶೇಟ್ (79) ಗುರುವಾರ ಬೆಳಗ್ಗೆ ಹೃದಯಘಾತದಿಂದ ನಿಧನರಾದರು.
ಮೃತರು ಪತ್ನಿ ಮತ್ತು ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.
ಸಂತಾಪ ;
ಗಣಪತಿ ಶೇಟ್ ನಿಧನಕ್ಕೆ ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್, ಪಟ್ಟಣ ಪಂಚಾಯತಿ ಸದಸ್ಯ ಅಶ್ವಿನಿಕುಮಾರ್, ಹೆಚ್. ವಸಂತ, ಚಂದ್ರಶೇಖರ್ ಶೇಟ್, ರವಿ ಶೇಟ್, ಮಿಲ್ ಈಶ್ವರಪ್ಪ ಗೌಡ, ಜಿ.ಟಿ ಈಶ್ವರಪ್ಪ ಗೌಡ, ಹತ್ವಾಲ್ ಮುರುಳಿಧರ, ಹೆಚ್ ಶ್ರೀನಿವಾಸ್, ಗೌತಮ್ ಕುಮಾರಸ್ವಾಮಿ, ಕುಂದಾಪುರದ ಉದಯಕುಮಾರ್ ಹಾಗೂ ಕೊಡಚಾದ್ರಿ ಅಡಿಕೆ ಮಂಡಿಯ ಎಲ್ಲಾ ಸಿಬ್ಬಂದಿಗಳು ಮೃತರ ಮನೆಗೆ ತೆರಳಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
Malnad Times App ಡೌನ್ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

