ಚಾಲಕನ ನಿಯಂತ್ರಣ ತಪ್ಪಿ ಕೊಡಚಾದ್ರಿಗೆ ಹೋಗುತ್ತಿದ್ದ ಜೀಪ್ ಪಲ್ಟಿ !

Written by Mahesha Hindlemane

Published on:

ಹೊಸನಗರ ; ಚಾಲಕನ ನಿಯಂತ್ರಣ ತಪ್ಪಿ ಕೊಲ್ಲೂರಿನಿಂದ ಕೊಡಚಾದ್ರಿಗೆ ಹೋಗುತ್ತಿದ್ದ ಜೀಪ್ ಪಲ್ಟಿಯಾದ ಘಟನೆ ಇೃದು ನಿಟ್ಟೂರು – ಕಟ್ಟಿನಹೊಳೆ ಮಾರ್ಗದ ಕುಂಬಳೆ ಗ್ರಾಮದ ಬಳಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಜೀಪ್‌ನಲ್ಲಿ ಕೇರಳ ಮೂಲದ 8 ಜನ ಭಕ್ತರಿದ್ದು, ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟಕ್ಕೆ ಭಕ್ತರು ಕೊಲ್ಲೂರಿನಿಂದ ಜೀಪ್‌ನಲ್ಲಿ ಹೊರಟಿದ್ದರು. ಚಾಲಕನ ಅತಿ ವೇಗದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿದ ಜೀಪ್ ಪಲ್ಟಿಯಾಗಿದೆ ಎನ್ನಲಾಗಿದೆ.

ಪಲ್ಟಿಯಾದ ಜೀಪ್ ಭಾಗಶಃ ಜಖಂ ಆಗಿದ್ದು, ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Comment