Ripponpete

ನಾಗರಹಳ್ಳಿಯಲ್ಲಿ ವಿಜೃಂಭಣೆಯಿಂದ ಜರುಗಿದ ಕೂಳೆಪಂಚಮಿ ಜಾತ್ರೋತ್ಸವ

RIPPONPETE ; ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಕೂಳೆಪಂಚಮಿಯ ಅಂಗವಾಗಿ ಸಂಭ್ರಮ ಸಡಗರದೊಂದಿಗೆ ಅದ್ಧೂರಿ ಜಾತ್ರೋತ್ಸವ ಜರುಗಿತು.

WhatsApp Group Join Now
Telegram Group Join Now
Instagram Group Join Now

ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮಿನಾರಾಯಣ ಭಟ್ ಮತ್ತು ಕಿರಣ್ ಭಟ್ ಪುರೋಹಿತತ್ವದಲ್ಲಿ ದೇವರಿಗೆ ಎಳನೀರು ಅಭಿಷೇಕ, ಪವಮಾನ ಪೂಜೆಯೊಂದಿಗೆ ವಿಶೇಷ ಹೂವಿನ ಅಲಂಕಾರ ಪೂಜೆ, ಮಹಾಮಂಗಳಾರತಿ ನೆರವೇರಿತು.

ಮಳೆಗಾಲದ ನಾಗರಪಂಚಮಿಯಲ್ಲಿ ಹರಕೆ ಮಾಡಿಕೊಂಡವರು ಬಂದು ಸರತಿ ಸಾಲಿನಲ್ಲಿ ನಿಂತು ದೇವರಿಗೆ ಸಮರ್ಪಿಸಿ ಹಣ್ಣು-ಕಾಯಿ ಕೊಟ್ಟು ದೇವರ ದರ್ಶನಾರ್ಶೀವಾದ ಪಡೆದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್‌ ಗೇರುಗಲ್ಲು, ಹೆಚ್.ಎಂ.ವರ್ತೇಶ್ ಗೌಡ, ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

ಕೂಳೆ ಪಂಚಮಿಯ ಅಂಗವಾಗಿ ಹುಂಚ, ಬಿಲ್ಲೇಶ್ವರ, ಕೋಣಂದೂರು, ಹೊಸನಗರ ಆನೆಗದ್ದೆ, ಶೆಟ್ಟಿಬೈಲು, ಸಮಟಗಾರು, ಹುಗುಡಿ, ಮಳಲಿಕೊಪ್ಪ, ಅಮೃತ, ಹುಂಚದಕಟ್ಟೆ, ವಾಲೆಮನೆ, ಸೊನಲೆ, ಹರಿದ್ರಾವತಿ ಮಾರುತಿಪುರ, ಹುಂಚರೋಡ್, ಹಿರೇಬೈಲು, ಹೆದ್ದಾರಿಪುರ, ಗರ್ತಿಕೆರೆ, ಬಿದರಹಳ್ಳಿ ಮೂಗುಡ್ತಿ, ತಳಲೆ, ಕಳಸೆ, ಬೆಳ್ಳೂರು, ಲಕ್ಕವಳ್ಳಿ, ಆಲವಳ್ಳಿ, ಕೆಂಚನಾಲ, ಕಮದೂರು, ಮಸರೂರು, ಆನಂದಪುರ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ, ಕೊಪ್ಪ, ಶಿವಮೊಗ್ಗ ಸೇರಿದಂತೆ ನಾಡಿನ ವಿವಿಧಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಹರಿದು ಬಂದು ದೇವರ ದರ್ಶನ ಪಡೆದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]