ಹೊಸನಗರ : ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯ ರೇಣುಕೇಶ್ ಅಧ್ಯಕ್ಷತೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಜಿ.ಸಿ ಶಾಂತರಾಜ್ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ಡಾ. ಶಾಂತರಾಜ್, ಜಂತುಹುಳು ಮಾರಕತೆಯನ್ನು ಹೊಂದಿದ್ದರಿಂದ ದೇಶಾದ್ಯಂತ ಪ್ರತಿ ವರ್ಷ ಫೆಬ್ರುವರಿ ಹತ್ತು ಹಾಗೂ ಆಗಸ್ಟ್ ಹತ್ತ ರಂದು ಜಂತುಹುಳ ನಿವಾರಣಾ ಕಾರ್ಯಕ್ರಮದ ಹಮ್ಮಿಕೊಂಡು ಒಂದರಿಂದ 19 ವರ್ಷದೊಳಗಿನ ಮಕ್ಕಳಿಗೆ ಸುರಕ್ಷತಾ ಮಾತ್ರೆಯನ್ನು ನೀಡಲಾಗುವುದೆಂದರು.
ಮಕ್ಕಳ ಹೊಟ್ಟೆಯಲ್ಲಿ ವಾಸಿಸುವ ಹುಳುಗಳು ಅವರ ಬೆಳವಣಿಗೆ ಪೌಷ್ಟಿಕತೆ ಮತ್ತು ಆರೋಗ್ಯಕ್ಕೆ ಧಕ್ಕೆ ಉಂಟು ಮಾಡಿಲಿದೆ. ಹೊಟ್ಟೆ ನೋವು, ತೂಕ ಕಡಿಮೆ, ರಕ್ತ ಹೀನತೆ ಸಂಭವಿಸಲಿರುವ ಕಾರಣ ಜಂತುಹುಳ ಮುಕ್ತರಾಗಲು ಕೈಗಳನ್ನು ಸ್ವಚ್ಛವಾಗಿ ಸೋಪಿನಿಂದ ತೊಳೆದುಕೊಳ್ಳಬೇಕು. ಉಗುರುಗಳನ್ನು ಕತ್ತರಿಸಿಕೊಳ್ಳುತ್ತಿರಬೇಕು. ಹಣ್ಣು-ಹಂಪಲುಗಳನ್ನು ಚೆನ್ನಾಗಿ ತೊಳೆದು ತಿನ್ನಬೇಕು. ಶೌಚಾಲಯಕ್ಕೆ ಹೋಗಿ ಬಂದ ಮೇಲೆ ಕೈ-ಕಾಲುಗಳನ್ನು ಸೋಪಿನಿಂದ ಚೆನ್ನಾಗಿ ತಿಳಿದುಕೊಳ್ಳಬೇಕು. ಆಗ ಮಾತ್ರ ಆರೋಗ್ಯದಿಂದ ಇರಲು ಸಾಧ್ಯವಾಗಲಿದೆ.

ಒಂದು ವರ್ಷದಿಂದ ಎರಡು ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ, 2 ರಿಂದ 3 ವರ್ಷದ ಮಕ್ಕಳಿಗೆ ಒಂದು ಮಾತ್ರೆ ಪುಡಿ ಮಾಡಿ ತಿನ್ನಿಸಬೇಕು. ಮೂರರಿಂದ 19 ವರ್ಷದೊಳಗಿನವರಿಗೆ ಒಂದು ಮಾತ್ರೆಯನ್ನು ಸರಿಯಾಗಿ ಚೀಪಿ ತಿನ್ನುವಂತೆ ತಿಳಿಸಬೇಕೆಂದರು.
ತಾಲೂಕು ಹಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಣಾಧಿಕಾರಿ ಬಿ. ಗೀತಾ ಕೆ ಎಸ್, ವಿನಂತಿ, ಆಶಾ, ಮೇಲ್ವಿಚಾರಕಿ ಗೀತಾ ಆರ್, ಆಶಾ ಕಾರ್ಯಕರ್ತೆ ಸವಿತಾ, ರಶ್ಮಿ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕರಿಬಸಮ್ಮ ಕಾರ್ಯಕ್ರಮ ನಿರೂಪಿಸಿದರು.

