Malenadu Rain | ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಭಾರಿ ವರ್ಷಧಾರೆ, ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆ ಸುರಿದಿದೆ ?

Written by Mahesh Hindlemane

Published on:

SHIVAMOGGA / CHIKKAMAGALURU | ಮಲೆನಾಡಿನಾದ್ಯಂತ ಆರಿದ್ರ ಮಳೆಯಬ್ಬರ ಜೋರಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆಯಾಗಿದೆ.

WhatsApp Group Join Now
Telegram Group Join Now
Instagram Group Join Now

ಶನಿವಾರ ಬೆಳಗ್ಗೆ 8:00ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಪ್ರಮಾಣದ ಮಳೆ ಸುರಿದಿದೆ ಎಂದು ಇಲ್ಲಿ ನೀಡಲಾಗಿದೆ.

Read more: ಭಾಗ್ಯಲಕ್ಷ್ಮಿ ಬಾಂಡ್ ಇದ್ದವರ ಖಾತೆಗಳಿಗೆ ಸರ್ಕಾರದಿಂದ ಬಿಡುಗಡೆಯಾಗಲಿದೆ 1 ಲಕ್ಷ ಹಣ !

ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :

  • ಮಾಸ್ತಿಕಟ್ಟೆ (ಹೊಸನಗರ) : 102
  • ಹುಲಿಕಲ್ (ಹೊಸನಗರ) : 93
  • ಯಡೂರು ಹೊಸನಗರ : 74
  • ಹೊಸೂರು-ಸಂಪೆಕಟ್ಟೆ (ಹೊಸನಗರ) : 67
  • ಕಾರ್ಗಲ್ (ಸಾಗರ) : 60
  • ಹೊಸನಗರ (ಹೊಸನಗರ) : 52
  • ಬಿದನೂರುನಗರ (ಹೊಸನಗರ) : 51
  • ನೊಣಬೂರು (ತೀರ್ಥಹಳ್ಳಿ) : 41.5
  • ಅರೇಹಳ್ಳಿ (ತೀರ್ಥಹಳ್ಳಿ) : 41
  • ಆರಗ (ತೀರ್ಥಹಳ್ಳಿ) : 38.5
  • ಕೋಡೂರು (ಹೊಸನಗರ) : 37.5
  • ಮೇಲಿನಬೆಸಿಗೆ (ಹೊಸನಗರ) : 35.5
  • ಬಾಂಡ್ಯ-ಕುಕ್ಕೆ (ತೀರ್ಥಹಳ್ಳಿ) : 35
  • ನೆರಟೂರು (ತೀರ್ಥಹಳ್ಳಿ) : 34.5

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ) :

  • ಬಣಕಲ್ (ಮೂಡಿಗೆರೆ) : 159.5
  • ಬೆಟ್ಟಗೆರೆ (ಮೂಡಿಗೆರೆ) : 67
  • ಫಲ್ಗುಣಿ (ಮೂಡಿಗೆರೆ) : 63.5
  • ಬೇಗಾರು (ಶೃಂಗೇರಿ) : 50.5
  • ಬಾಳೂರು (ಮೂಡಿಗೆರೆ) : 44.5
  • ಶಾನುವಳ್ಳಿ (ಕೊಪ್ಪ) : 39.5
  • ಹೆಸಗಲ್ಲು(ಬೆಳಗೊಳ) (ಮೂಡಿಗೆರೆ) : 38.5
  • ನಂದಿಪುರ (ಮೂಡಿಗೆರೆ) : 35
  • ಕಮ್ಮರಡಿ (ಕೊಪ್ಪ) : 31
  • ಮಾಕೋನಹಳ್ಳಿ (ಮೂಡಿಗೆರೆ) : 31

ಲಿಂಗನಮಕ್ಕಿ ಜಲಾಶಯಕ್ಕೆ 9 ಅಡಿ ನೀರು :

1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಶನಿವಾರ ಬೆಳಗ್ಗೆ 8:00 ಗಂಟೆಗೆ 1749.45 ಅಡಿ ತಲುಪಿದ್ದು ಜಲಾಶಯಕ್ಕೆ 9184 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ1740.10 ದಾಖಲಾಗಿದ್ದು ಕಳೆದ ವರ್ಷಕ್ಕಿಂತ 9 ಅಡಿ ಹೆಚ್ಚು ನೀರು ಸಂಗ್ರಹವಾಗಿದೆ.

Read more: SHIVAMOGGA | DCC ಬ್ಯಾಂಕ್ ಚುನಾವಣೆ, ಗೆದ್ದು ಬೀಗಿದ ಕಾಂಗ್ರೆಸ್ ಅಭ್ಯರ್ಥಿಗಳು !

Author Profile

Mahesh Hindlemane
Mahesh Hindlemane
ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.

Leave a Comment