ಮೂರು ಕಾರುಗಳ ನಡುವೆ ಸರಣಿ ಅಪಘಾತ ; ಹರಿಹರಪುರ ಮಠದ ಶ್ರೀಗಳು ಸೇರಿ ಹಲವರು ಪ್ರಾಣಾಪಾಯದಿಂದ ಪಾರು

Written by malnadtimes.com

Published on:

ತೀರ್ಥಹಳ್ಳಿ ; ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಶಿರಸಿಗೆ ಹೊರಟಿದ್ದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಮಠದ ಶ್ರೀಗಳವರ ಕಾರು ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ಕೋಟೆಗದ್ದೆಯಲ್ಲಿ ಸರಣಿ ಅಪಘಾತವಾಗಿದೆ.

WhatsApp Group Join Now
Telegram Group Join Now
Instagram Group Join Now

ಶ್ರೀಗಳ ವಾಹನ ಸಾಗುತ್ತಿರುವ ಸಂದರ್ಭದಲ್ಲಿ ದನವೊಂದು ರಸ್ತೆಗೆ ಅಡ್ಡ ಬಂದಾಗ ಅದನ್ನು ತಪ್ಪಿಸಲು ಹೋದಾಗ ಈ ಅವಘಡ ಸಂಭವಿಸಿದೆ. ಮುಂಭಾಗದಲ್ಲಿದ್ದ ಎಸ್ಕಾರ್ಟ್ ಹಾಗೂ ಮಧ್ಯ ಸಾಗುತ್ತಿದ್ದ ಶ್ರೀಗಳ ವಾಹನ ಹಾಗೂ ಹಿಂಭಾಗದಲ್ಲಿದ್ದ ಭಕ್ತರ ವಾಹನ ಸೇರಿದಂತೆ ಮೂರು ವಾಹನಗಳ ನಡುವೆ ಏಕಾಏಕಿ ಅಪಘಾತ ಸಂಭವಿಸಿದ್ದು ಮೂರು ವಾಹನಗಳು ಜಖಂ ಆಗಿದ್ದು ಅದೃಷ್ಟವಶಾತ್ ವಾಹನದಲ್ಲಿದ್ದ ಯಾರಿಗೂ ಪ್ರಾಣಾಪಾಯವಾಗದೆ ಅಪಾಯದಿಂದ ಪಾರಾಗಿದ್ದಾರೆ.

ಶ್ರೀಗಳಿಗೆ ಸಹ ಯಾವುದೇ ತೊಂದರೆಯಾಗದೆ ಪ್ರಾಣಾಪಾಯದಿಂದ ಪಾರಾಗಿದ್ದು ಬೇರೆ ವಾಹನದ ಮೂಲಕ ಶಿರಸಿಗೆ ಪ್ರಯಾಣ ಬೆಳೆಸಿದರು ಎಂದು ತಿಳಿದು ಬಂದಿದೆ.

Leave a Comment