ಗರ್ಭಿಣಿ ಹಸುವಿನ ಕುತ್ತಿಗೆ ಕಡಿದು ವಿಕೃತಿ ಮೆರೆದ ಕಿಡಿಗೇಡಿಗಳು

Written by Mahesha Hindlemane

Updated on:

ತೀರ್ಥಹಳ್ಳಿ : ರಾಜ್ಯದಲ್ಲಿ ಗೋವುಗಳ ಮೇಲಿನ ವಿಕೃತಿ ಮುಂದುವರೆದಿದ್ದು, ಇದೀಗ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಪಂ ವ್ಯಾಪ್ತಿಯ ಅಗಳಬಾಗಿಲು ಗ್ರಾಮದಲ್ಲಿ ಚಂದವಳ್ಳಿಯ ಶ್ಯಾಮಣ್ಣ (ಹೂವಪ್ಪ) ಎಂಬುವರ ಮೇಯಲು ಬಿಟ್ಟದ್ದ ಗರ್ಭಿಣಿ ಹಸುವಿನ ಕುತ್ತಿಗೆಯನ್ನೇ ಕತ್ತಿಯಿಂದ ಕಡಿದ ದುಷ್ಕೃತ್ಯ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ದಾಳಿಯ ಏಟಿಗೆ ಹಸುವಿನ ಕುತ್ತಿಗೆಯ ಮೇಲ್ಭಾಗದ ಸುಮಾರು ಮೂರು ಇಂಚು ಆಳದಲ್ಲಿ ಮಾಂಸದ ತುಂಡು ಹಾರಿ ಹೋಗಿದ್ದು ಕುತ್ತಿಗೆ ಎಲುಬು ಕಾಣುವಂತಿದೆ. ಇದನ್ನು ನೋಡಿದ ಗ್ರಾಮಸ್ಥರು ಹಸುವಿನ ಮಾಲೀಕರಿಗೆ ತಿಳಿಸಿದ್ದಾರೆ. ಕೂಡಲೇ ಪಶು ವೈದ್ಯರನ್ನು ಚಿಕಿತ್ಸೆ ಕೊಡಿಸಲಾಗಿದೆ.

ಮೂಕ ಪ್ರಾಣಿಗಳನ್ನು ಕಡಿದು ನೀಚತನ ಪ್ರದರ್ಶಿಸುವ ಇಂತಹ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

Leave a Comment