ನೆವಟೂರು ಹಾನಂಬಿ ರಸ್ತೆ ಕಾಮಗಾರಿಗೆ ಶಾಸಕ ಬೇಳೂರು ಗುದ್ದಲಿ ಪೂಜೆ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಬಹುವರ್ಷದ ಬೇಡಿಕೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸರ್ಕಾರದಿಂದ ನೆವಟೂರು ಸಂಪರ್ಕದ ಹಾನಂಬಿ ರಸ್ತೆ ಅಭಿವೃದ್ದಿಗೆ 17 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದ್ದಾರೆಂದು ಗ್ರಾಮಸ್ಥರು ಶಾಸಕರನ್ನು ಪ್ರಶಂಸಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆವಟೂರು ಮೂಡಾಗಲು ಲಕ್ಕವಳ್ಳಿ ಸಂಪರ್ಕದ ಹಾನಂಬಿ ರಸ್ತೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಹಾನಂಬಿ ರಸ್ತೆಗೆ ಹೊಂದಿಕೊಂಡಿರುವ ಹಲವು ಖಾತೆದಾರ ರೈತರು ಶಾಸಕರ ಬಳಿ ದೂರು ನೀಡಿ ಹೆಚ್ಚು ಅಗಲ ಮಾಡದೇ ಬಂಡಿಗಾಡಿ, ಟಿಲ್ಲರ್, ಕಾರುಗಳು ಮಾತ್ರ ಹೋಗುವಷ್ಟು ಅಗಲ ರಸ್ತೆ ಮಾಡಿ ಇನ್ನು ಹೆಚ್ಚು ಅಗಲ ಮಾಡಿದರೆ ಜಮೀನು ಕಳೆದುಕೊಳ್ಳಬೇಕಾಗುವುದೆಂದು ಹೇಳಿದಾಗ, ಶಾಸಕರು ನಿಮಗೆ ಕೃಷಿ ಉಪಕರಣಗಳನ್ನು ಸಾಗಿಸಲು ಈ ರಸ್ತೆ ನಿರ್ಮಿಸಲಾಗುತ್ತಿದೆ. ತಾವು ಸ್ವಯಂಪ್ರೇರಿತರಾಗಿ ಸಹಕಾರ ಮಾಡಬೇಕು ಈ ರೀತಿ ಮಾಡುವುದು ಸೂಕ್ತವಲ್ಲ ಎಂದು ಖಡಕ್ ವಾರ್ನ್ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರುಮೌಳಿ, ಚಂದ್ರಪ್ಪ, ಬಾಳೂರು ಗ್ರಾಮ ಪಂಚಾಯಿತ್ ಅಧ್ಯಕ್ಷ ಶ್ರೀನಿವಾಸ ಆಚಾರ್, ಗ್ರಾಮ ಪಂಚಾಯ್ತಿ ಸದಸ್ಯರು ಪಿಡಿಓ ಮತ್ತು ಸಣ್ಣಕ್ಕಿ ಮಂಜು, ಶಿವಪ್ಪ ವಡಾಹೊಸಳ್ಳಿ, ಸಂತೋಷ (ಚಿಂಟು), ಬೈರಪ್ಪ, ಇನ್ನಿತರರು, ಗ್ರಾಮಸ್ಥರು ಹಾಜರಿದ್ದರು.

Leave a Comment