ಮಲೆನಾಡಿನ ವಿಶ್ವಾಸಾರ್ಹ ಸುದ್ದಿ · ಶಿವಮೊಗ್ಗ · ಚಿಕ್ಕಮಗಳೂರು · ಕರ್ನಾಟಕ
ಮುಖಪುಟಸಾಗರ
ಸಾಗರ

ಸಾಗರ: ನಗರಸಭೆ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ: ಭೂ ದಾಖಲೆಗಳ ಪರಿಶೀಲನೆ

ಸಾಗರ: ಜಂಬಗಾರು ಗ್ರಾಮದ ಸರ್ವೇ ನಂಬರ್ 63ಕ್ಕೆ ಸಂಬಂಧಿಸಿದ ಸುಮೋಟೊ ಪ್ರಕರಣದ ಹಿನ್ನೆಲೆಯಲ್ಲಿ ಸಾಗರ ನಗರಸಭೆ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದೆ. ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಪರಿಶೀಲನಾ ಕಾರ್ಯಾಚರಣೆ ಸ್ಥಳೀಯವಾಗಿ ಕುತೂಹಲ ಮೂಡಿಸಿದೆ. ಜಮೀನಿಗೆ…

Koushik G K
ಪ್ರಕಟಿತ: 10 Aug 2026, 7:45 PM · ನವೀಕರಿಸಿದ: 10 Aug 2026, 7:45 PM

ಸುದ್ದಿ ಸಾರಾಂಶ

ಸಾಗರ: ಜಂಬಗಾರು ಗ್ರಾಮದ ಸರ್ವೇ ನಂಬರ್ 63ಕ್ಕೆ ಸಂಬಂಧಿಸಿದ ಸುಮೋಟೊ ಪ್ರಕರಣದ ಹಿನ್ನೆಲೆಯಲ್ಲಿ ಸಾಗರ ನಗರಸಭೆ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದೆ. ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಪರಿಶೀಲನಾ ಕಾರ್ಯಾಚರಣೆ ಸ್ಥಳೀಯವಾಗಿ ಕುತೂಹಲ…

WhatsApp Group Join Now
Telegram Group Join Now
Instagram Group Join Now
ವರ್ಗಸಾಗರ
ಪ್ರಕಟಿತ ಸಮಯ10 Aug 2026, 7:45 PM
ಮೂಲ ಪರಿಶೀಲನೆಸ್ಥಳೀಯ ಮಾಹಿತಿ, ಅಧಿಕೃತ ಪ್ರಕಟಣೆ ಅಥವಾ ವರದಿಗಾರರ ಪರಿಶೀಲನೆ ಆಧಾರ.
📢 Stay Updated! Join our WhatsApp Channel Now →

ಸಾಗರ: ಜಂಬಗಾರು ಗ್ರಾಮದ ಸರ್ವೇ ನಂಬರ್ 63ಕ್ಕೆ ಸಂಬಂಧಿಸಿದ ಸುಮೋಟೊ ಪ್ರಕರಣದ ಹಿನ್ನೆಲೆಯಲ್ಲಿ ಸಾಗರ ನಗರಸಭೆ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದೆ.

ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಪರಿಶೀಲನಾ ಕಾರ್ಯಾಚರಣೆ ಸ್ಥಳೀಯವಾಗಿ ಕುತೂಹಲ ಮೂಡಿಸಿದೆ. ಜಮೀನಿಗೆ ಸಂಬಂಧಿಸಿದ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ನಗರಸಭೆಯ ಸಂಬಂಧಪಟ್ಟ ವಿಭಾಗದ ಕಡತಗಳು, ಹಳೆಯ ದಾಖಲೆಗಳು ಹಾಗೂ ಭೂ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ.

ಡಿವೈಎಸ್ಪಿ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಮಂಜೂರಾತಿ ಪತ್ರಗಳು, ಖಾತೆ ಬದಲಾವಣೆ ದಾಖಲೆಗಳು ಹಾಗೂ ಜಮೀನಿಗೆ ಸಂಬಂಧಿಸಿದ ಪ್ರಮುಖ ಕಾಗದಪತ್ರಗಳನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ.

ನಗರಸಭೆಯ ಕೆಲ ಸಿಬ್ಬಂದಿಯಿಂದಲೂ ಮಾಹಿತಿ ಪಡೆದುಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಮಧ್ಯಾಹ್ನದ ನಂತರವೂ ಮುಂದುವರಿದಿದೆ ಎಂದು ಡಿವೈಎಸ್ಪಿ ಚಂದ್ರಶೇಖರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ತನಿಖೆ ಪೂರ್ಣಗೊಂಡ ಬಳಿಕ ಪ್ರಕರಣದ ನೈಜ ಸ್ವರೂಪ ಸ್ಪಷ್ಟವಾಗಲಿದೆ. ದಾಖಲೆ ಪರಿಶೀಲನೆಯ ನಂತರ ಅಕ್ರಮಗಳು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಲೋಕಾಯುಕ್ತ ಅಧಿಕಾರಿಗಳ ಈ ದಿಢೀರ್ ಭೇಟಿಯಿಂದ ಸಾಗರ ನಗರಸಭೆ ವಲಯದಲ್ಲಿ ಚರ್ಚೆ ಆರಂಭವಾಗಿದ್ದು, ಮುಂದಿನ ತನಿಖಾ ವರದಿ ಕುರಿತು ಸಾರ್ವಜನಿಕರಲ್ಲಿ ಕುತೂಹಲ ಮೂಡಿದೆ.

ಸಂಪಾದಕೀಯ ಸೂಚನೆ: ಈ ಸುದ್ದಿಯಲ್ಲಿ ತಪ್ಪು ಅಥವಾ ತಿದ್ದುಪಡಿ ಅಗತ್ಯವಿದ್ದರೆ ನಮ್ಮ ಸಂಪರ್ಕ ಪುಟದ ಮೂಲಕ ತಿಳಿಸಿ. ಪ್ರಕಟಿತ ಮಾಹಿತಿಯನ್ನು ಪರಿಶೀಲಿಸಿ ಅಗತ್ಯವಿದ್ದರೆ ನವೀಕರಿಸಲಾಗುತ್ತದೆ.