ಹೊಸನಗರ ; ತಾಲ್ಲೂಕಿನದ್ಯಂತ ವರದಿಯಾಗುವ ಅಪಘಾತ ಪ್ರಕರಣಗಳು ರಾತ್ರಿ ವೇಳೆಯಲ್ಲಿ ವಾಹನದ ಗೋಚರತೆ ಕಡಿಮೆ ಇರುವ ಕಾರಣದಿಂದ ಸಂಭವಿಸುವುದು ಕಂಡು ಬಂದಿದ್ದು ಆದ್ದರಿಂದ ಸಾರ್ವಜನಿಕರ ಹಿತದ್ಯಷ್ಠಿಯಿಂದ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾತ್ರಿ ವೇಳೆಯಲ್ಲಿ ಗೂಡ್ಸ್ ವಾಹನಗಳು, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳು ಮತ್ತು ಭಾರಿ ವಾಹನಗಳ ಗೋಚರತೆಯನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ ಹೊಸನಗರ ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ರವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೆಕ್ಟರ್ ಶಂಕರಗೌಡ ಪಾಟೀಲ್ರವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಹೊಸನಗರದ ಪಟ್ಟಣದಲ್ಲಿ ಹಾಗೂ ಹೊರ ತಾಲ್ಲೂಕಿನಿಂದ ಬರುವ ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕರ್ಗಳನ್ನು ಅಂಟಿಸುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ವಾಹನಗಳಿಗೆ ರೆಡಿಯಂ ಸ್ಟಿಕರ್ಗಳನ್ನು ಅಂಟಿಸಿದರು.

ಅಪಘಾತ ತಡೆಯಲು ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಂಟಿಸುವ ಕಾರ್ಯಾಚರಣೆ
Written by malnadtimes.com
Published on: