ಶಿವಮೊಗ್ಗ: ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ಫೀಡರ್ ಎ.ಎಫ್-8ರಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 18 ರಂದು ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಿಸಿದೆ.
ಈ ಅವಧಿಯಲ್ಲಿ ಆಲ್ಕೋಳ ಸರ್ಕಲ್, ಅರಣ್ಯ ಕಚೇರಿ, ಇಂದಿರಾಗಾಂಧಿ ಬಡಾವಣೆ, ಶಿವಪ್ಪ ನಾಯಕ ಬಡಾವಣೆ, ಜಯದೇವ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಕೆಎಸ್ಆರ್ಟಿಸಿ ಲೇಔಟ್, ಕಾಶಿಪುರ, ಲಕ್ಕಪ್ಪ ಲೇಔಟ್, ಹನುಮಂತಪ್ಪ ಬಡಾವಣೆ, ತಮಿಳು ಕ್ಯಾಂಪ್, ಕುವೆಂಪು ಬಡಾವಣೆ, ಎನ್ಎಂಸಿ ಕಾಂಪೌಂಡ್, ಲಕ್ಷ್ಮೀಪುರ, ಕೆಂಚಪ್ಪ ಲೇಔಟ್, ಹುಡ್ಕೋ ಕಲ್ಲಹಳ್ಳಿ (ಎ ರಿಂದ ಎಫ್ ಬ್ಲಾಕ್), ಕರಿಯಣ್ಣ ಬಿಲ್ಡಿಂಗ್, ತಿಮ್ಮಕ್ಕ ಲೇಔಟ್, ಅಣ್ಣ ಹಜಾರೆ ಪಾರ್ಕ್, ಬಸವ ಮಂಟಪ, ದಾಮೋಧರ ಕಾಲೋನಿ, ಸೂಡಾ ಕಚೇರಿ, ಪೊಲೀಸ್ ಚೌಕಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ಮೆಸ್ಕಾಂ ಅಧಿಕಾರಿಗಳು, ಸಾರ್ವಜನಿಕರು ತೊಂದರೆ ಅನುಭವಿಸದಂತೆ ಮುಂಚಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಸಹಕರಿಸುವಂತೆ ಮನವಿ ಮಾಡಿದ್ದಾರೆ.

