HOSANAGARA | ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಒಂದಿಲ್ಲೊಂದು ಅನಾಹುತಗಳನ್ನು ಸೃಷ್ಟಿಸುತ್ತಿದೆ.

ಎಲ್ಲೆಲ್ಲಿ ಏನೇನಾಗಿದೆ ?
- ಹೊಸಹಳ್ಳಿ ಹರೀಶ ಬಿನ್ ನಾಗಪ್ಪನವರ ವಾಸದ ಮನೆ ಹಾನಿ
- ಹರತಾಳು ಗ್ರಾಮದಲ್ಲಿ ಮನೆ ಕುಸಿತ
- ಮಾವಿನಕೊಪ್ಪ ಗ್ರಾಮದ ಜಯಲಕ್ಷ್ಮಿ ಗೋವಿಂದಪ್ಪನವರ ಮನೆ ಕುಸಿತ
- ಬರುವೆ ಗ್ರಾಮದ ರತ್ನಮ್ಮ ಕೋಂ ತಿಮ್ಮಪ್ಪನವರ ಮನೆ ಕುಸಿತ
- ಕಚಿಗೆಬೈಲು ಗ್ರಾಮದ ಗಾಯಿತ್ರಿ ಕೋಂ ದೇವರಾಜ ಮನೆ ಕುಸಿತ
- ಹರಿದ್ರಾವತಿ ಹಳೇ ಬಾಣಿಗ ಲವಪ್ಪ ಬಿನ್ ಶಿವಪ್ಪನವರ ಕೊಟ್ಟಿಗೆ ಹಾನಿ
- ಬಾಣಿಗ ಗ್ರಾಮದ ಸರ್ಕಾರಿ ಶಾಲೆಯ ಬಾವಿ ಕುಸಿತ
- ಬೇಳೂರು ಗ್ರಾಮದ ಬಿ.ಜಿ ಲೋಕಪ್ಪ ಗೌಡ ಬಿನ್ ಗಂಗೆಗೌಡರವರ ಮನೆ ಗೋಡೆ ಕುಸಿತ
- ಕರಿಮನೆ ಶೇಷಪ್ಪ ಬಿನ್ ಹೂವಪ್ಪನವರ ಮನೆ ಕುಸಿತ
- ಕಿಳಂದೂರು ಗ್ರಾಮದ ರಾಮಕೃಷ್ಣ ಬಿನ್ ತಿಮ್ಮಪ್ಪ ಗೌಡರ ಮನೆ ಸಮೀಪ ಧರೆ ಕುಸಿತ
- ಮೂಡುಗೊಪ್ಪ ಗ್ರಾಮದ ಮಂಜುಳಾ ಕೋಂ ಜಯಕುಮಾರ್ ಮನೆಯ ಗೋಡೆ ಕುಸಿತ
- ಮೂಡುಗೊಪ್ಪ ಗ್ರಾಮದ ಹಿರೇಮಠದ ನಾಗರತ್ನ ಕೋಂ ಮುತ್ತಣ್ಣನವರ ಮನೆಯ ಗೋಡೆ ಕುಸಿತ
- ಚಿಕ್ಕಜೇನಿ ಗ್ರಾಮದ ಶೇಖರರವರ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿ
- ಮಾರುತಿಪುರ ಗ್ರಾಮದ ಕೃಷ್ಣರವರ ಜಮೀನಿನ ಮೇಲೆ ಹಳ್ಳ ಹರಿದು ತೋಟ ಸಂಪೂರ್ಣ ನಾಶ
- ಮಾರುತಿಪುರ ರಸ್ತೆ ಸಂಪೂರ್ಣ ಹಾನಿ
- ಮುತ್ತೂರು ಗ್ರಾಮದ ಕೆರೆದಂಡೆ ಒಡೆದು ರಾಜುರವರ ಖಾತೆ ಜಮೀನಿಗೆ ಹಾನಿ
ಒಟ್ಟಾರೇ ಹೊಸನಗರ ತಾಲ್ಲೂಕಿನಲ್ಲಿ ಮಳೆಯ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.

ಪರಿಶೀಲನೆ:
ಹೊಸನಗರ ತಾಲ್ಲೂಕಿನಲ್ಲಿ ಸುಮಾರು ಅಂದಾಜು 35 ಮನೆಗಳು, 5 ಕೊಟ್ಟಿಗೆಗಳು ಗದ್ದೆ, ತೋಟ, ಸಂಪೂರ್ಣ ಹಾಳಾಗಿದ್ದು ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಆಯಾಯ ಭಾಗದ ಗ್ರಾಮ ಆಡಳಿತಾಧಿಕಾರಿ ಕೌಶಿಕ್, ನವೀನ್, ಸಿದ್ದಪ್ಪ ಲೋಹಿತ್, ದೀಪು ಇನ್ನೂ ಮುಂತಾದವರು, ಜೊತೆಗೆ ರೆವಿನ್ಯೂ ಇನ್ಸ್ಪೆಕ್ಟರ್ ರೇಣುಕಯ್ಯ ತಾಲ್ಲೂಕು ಕಛೆರಿಯ ಸಿಬ್ಬಂದಿಗಳು ಇವರ ಜೊತೆಗೆ ಶಾಸಕ ಬೇಳೂರು ಗೋಪಾಲಕೃಷ್ಣರವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಗಗ್ಗ ಬಸವರಾಜ್ ಇನ್ನೂ ಮುಂತಾದವರು ಸ್ಥಳ ಪರಿಶೀಲಿಸಿ ನೊಂದವರಿಗೆ ಸಹಾಯ ಹಸ್ತ ನೀಡಲು ಮುಂದಾಗಿದ್ದಾರೆ.




Author Profile

- ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.
Latest entries
Adike RateJune 1, 2025Arecanut, Black Pepper Price 31 May 2025 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?
SagaraMay 31, 2025ಪತ್ರಕರ್ತನ ಮೇಲೆ ಹಲ್ಲೆ ಯತ್ನ, ಜೀವ ಬೆದರಿಕೆ ; ಕ್ರಮಕ್ಕೆ ಒತ್ತಾಯ
RipponpeteMay 31, 2025ಜೂ. 4ಕ್ಕೆ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿಯ ನೂತನ ಶಿಲಾಮಯ ದೇವಸ್ಥಾನ ಲೋಕಾರ್ಪಣೆ
HosanagaraMay 31, 2025ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ