ಶಿವಮೊಗ್ಗ : ಮಲೆನಾಡಿನಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಇಂದು ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕಿನ ಶಾಲೆ, ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.
ಗುರುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಸೂರು (ಸಂಪೆಕಟ್ಟೆ) ಯಲ್ಲಿ ರಾಜ್ಯದಲ್ಲೇ ಅತ್ಯಧಿಕ 381 ಮಿ.ಮೀ. ಮಳೆ ದಾಖಲಾಗಿದೆ.
ಮತ್ತೆಲ್ಲೆಲ್ಲಿ ಎಷ್ಟಾಗಿದೆ ಮಳೆ ? (ಮಿ.ಮೀ.ಗಳಲ್ಲಿ) :
- ಹುಲಿಕಲ್ – ಹೊಸನಗರ : 270
- ಯಡೂರು – ಹೊಸನಗರ : 234
- ಮಾಸ್ತಿಕಟ್ಟೆ – ಹೊಸನಗರ : 217
- ಮಾಣಿ – ಹೊಸನಗರ 207
- ಸುಳಗೋಡು – ಹೊಸನಗರ : 204
- ತೀರ್ಥಮತ್ತೂರು – ತೀರ್ಥಹಳ್ಳಿ : 169.5
- ಹೊಸಳ್ಳಿ – ತೀರ್ಥಹಳ್ಳಿ : 165.5
- ಮೇಗರವಳ್ಳಿ – ತೀರ್ಥಹಳ್ಳಿ : 165
- ಹೊನ್ನೆತಾಳು – ತೀರ್ಥಹಳ್ಳಿ : 160
- ಸಾವೇಹಕ್ಲು ಹೊಸನಗರ : 159
- ಆರಗ – ತೀರ್ಥಹಳ್ಳಿ : 152
- ನೆರಟೂರು – ತೀರ್ಥಹಳ್ಳಿ : 143
- ಅರೇಹಳ್ಳಿ – ತೀರ್ಥಹಳ್ಳಿ : 134.5
- ಬಿದನೂರುನಗರ – ಹೊಸನಗರ : 134
- ಸಾಲ್ಗಡಿ – ತೀರ್ಥಹಳ್ಳಿ : 130
- ಚಕ್ರಾನಗರ – ಹೊಸನಗರ : 120
- ಬೆಜ್ಜವಳ್ಳಿ – ತೀರ್ಥಹಳ್ಳಿ : 109
- ಲಿಂಗನಮಕ್ಕಿ – ಸಾಗರ : 83
- ಹೊಸನಗರ – ಹೊಸನಗರ : 75.4
ಲಿಂಗನಮಕ್ಕಿ ಜಲಾಶಯ :
1819 ಅಡಿ ಗರಿಷ್ಟ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಗುರುವಾರ ಬೆಳಗ್ಗೆ 8:00 ಗಂಟೆಗೆ 1787.80 ಅಡಿ ತಲುಪಿದ್ದ ಕಳೆದ ವರ್ಷ ಇದೇ ಅವಧಿಗೆ 1754.95 ಅಡಿ ನೀರಿನ ಸಂಗ್ರಹವಾಗಿತ್ತು. ಜಲಾಶಯಕ್ಕೆ 45070 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.