ಶಿವಮೊಗ್ಗ : ಮಲೆನಾಡಿನಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಇಂದು ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕಿನ ಶಾಲೆ, ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.
ಗುರುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಸೂರು (ಸಂಪೆಕಟ್ಟೆ) ಯಲ್ಲಿ ರಾಜ್ಯದಲ್ಲೇ ಅತ್ಯಧಿಕ 381 ಮಿ.ಮೀ. ಮಳೆ ದಾಖಲಾಗಿದೆ.
ಮತ್ತೆಲ್ಲೆಲ್ಲಿ ಎಷ್ಟಾಗಿದೆ ಮಳೆ ? (ಮಿ.ಮೀ.ಗಳಲ್ಲಿ) :
- ಹುಲಿಕಲ್ – ಹೊಸನಗರ : 270
- ಯಡೂರು – ಹೊಸನಗರ : 234
- ಮಾಸ್ತಿಕಟ್ಟೆ – ಹೊಸನಗರ : 217
- ಮಾಣಿ – ಹೊಸನಗರ 207
- ಸುಳಗೋಡು – ಹೊಸನಗರ : 204
- ತೀರ್ಥಮತ್ತೂರು – ತೀರ್ಥಹಳ್ಳಿ : 169.5
- ಹೊಸಳ್ಳಿ – ತೀರ್ಥಹಳ್ಳಿ : 165.5
- ಮೇಗರವಳ್ಳಿ – ತೀರ್ಥಹಳ್ಳಿ : 165
- ಹೊನ್ನೆತಾಳು – ತೀರ್ಥಹಳ್ಳಿ : 160
- ಸಾವೇಹಕ್ಲು ಹೊಸನಗರ : 159
- ಆರಗ – ತೀರ್ಥಹಳ್ಳಿ : 152
- ನೆರಟೂರು – ತೀರ್ಥಹಳ್ಳಿ : 143
- ಅರೇಹಳ್ಳಿ – ತೀರ್ಥಹಳ್ಳಿ : 134.5
- ಬಿದನೂರುನಗರ – ಹೊಸನಗರ : 134
- ಸಾಲ್ಗಡಿ – ತೀರ್ಥಹಳ್ಳಿ : 130
- ಚಕ್ರಾನಗರ – ಹೊಸನಗರ : 120
- ಬೆಜ್ಜವಳ್ಳಿ – ತೀರ್ಥಹಳ್ಳಿ : 109
- ಲಿಂಗನಮಕ್ಕಿ – ಸಾಗರ : 83
- ಹೊಸನಗರ – ಹೊಸನಗರ : 75.4
ಲಿಂಗನಮಕ್ಕಿ ಜಲಾಶಯ :
1819 ಅಡಿ ಗರಿಷ್ಟ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಗುರುವಾರ ಬೆಳಗ್ಗೆ 8:00 ಗಂಟೆಗೆ 1787.80 ಅಡಿ ತಲುಪಿದ್ದ ಕಳೆದ ವರ್ಷ ಇದೇ ಅವಧಿಗೆ 1754.95 ಅಡಿ ನೀರಿನ ಸಂಗ್ರಹವಾಗಿತ್ತು. ಜಲಾಶಯಕ್ಕೆ 45070 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.